Follow Us On

WhatsApp Group
Important
Trending

ಕಾರಿಗೆ ಡಿಕ್ಕಿ ಹೊಡೆದು ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ: ಪೊಲೀಸರು ಕೈ ಮಾಡಿದರೂ ನಿಲ್ಲಿಸದೆ ಪರಾರಿಯಾಗಿದ್ದ

ಹಳಿಯಾಳ: ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಟಾಟಾ ಏಸ್ ವಾಹನವನ್ನು ಬೆನ್ನತ್ತಿದ್ದ ಪೊಲೀಸರು ಆರೋಪಿಯನ್ನು ಹಿಡಿಯಲ್ಲಿ ಯಶಸ್ವಿಯಾದ ಘಟನೆ ತಾಲೂಕಿನ ಮೊಲೆಮ್ ಔಟ್ ಪೋಸ್ಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ವಾಹನ ವಶಪಡಿಸಿಕೊಳ್ಳಲು ಪೊಲೀಸರು ತಪಾಸಣೆ ನಡೆಸುವ ವೇಳೆ, ಆರೋಪಿಯ ಕಳ್ಳತನದ ವಿಷಯವೂ ಬಯಲಾಗಿದೆ. ಹೌದು, ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಟಾಟಾ ಏಸ್ ವಾಹನ ಬಾಗಲಕೋಟದಿಂದ ಕದ್ದು ತಂದಿದ್ದು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಹೆದ್ದಾರಿಯಲ್ಲಿ ಪಿಕ್‌ಅಪ್ ವಾಹನ ಬಂದಾಗ ಪೊಲೀಸರು ಕೈ ಸನ್ನೆ ಮಾಡಿದ್ದರು. ಆದರೆ, ಈ ವೇಳೆ ನಿಲ್ಲಿಸದೇ ಮುಂದೆ ಸಾಗಿದಾಗ ಬೆನ್ನತ್ತಿ ಅದನ್ನು ಪೊಲೀಸರು ಹಿಡಿದಿದ್ದಾರೆ. ವಾಹನದ ಮಾಹಿತಿ ಪರಿಶೀಲಿಸಿದಾಗ ನಾಗರಾಜ ಎನ್ನುವವರಿಗೆ ಸೇರಿದ ಟಾಟಾ ಏಸ್ ವಾಹನವಾಗಿದ್ದು, ಅದನ್ನು ಜನವರಿ 29 ರಂದು ಬಾಗಲಕೋಟದಿಂದ ಕಳ್ಳತನ ಮಾಡಿ ತರಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button