Focus NewsImportant
Trending

ವಿಪರೀತ ಸಾಲ ಮತ್ತು ಅನಾರೋಗ್ಯ : ಕೆರೆಗೆ ಹಾರಿ ವ್ಯಕ್ತಿ ಸಾವಿಗೆ ಶರಣು

ಸಿದ್ದಾಪುರ : ವ್ಯಕ್ತಿಯೊರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ಧಾಪುರ ಪಟ್ಟಣದ ಪುಟ್ಟಪ್ಪನ ಕೆರೆಯಲ್ಲಿ ನಡೆದಿದೆ. ಈ ವ್ಯಕ್ತಿಯು ವಿಪರೀತ ಸಾಲ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಘಟನೆಗೆ ಸಂಬoಧಿಸಿದoತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗರಾಜ್ ಕನ್ನೇಶ್ ಮಡಿವಾಳ ಕಡಕೇರಿ ಮೃತ ವ್ಯಕ್ತಿ. ಪಟ್ಟಣದಲ್ಲಿ ಹೋಟೆಲ್ ನಡೆಸಿ ಬಿಸಿನೆಸ್ ನಷ್ಟವಾಗಿ ವಿಪರೀತ ಸಾಲ ಮಾಡಿಕೊಂಡು ಸಾಲ ತೀರಿಸಲು ಬೆಂಗಳೂರು ಮುಂತಾದ ಕಡೆ ಕೆಲಸಕ್ಕೆ ಹೋದವನು ಇತೀಚೆಗೆ ವಾಪಾಸ್ ಮನೆಗೆ ಬಂದವನು ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ.

40 ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ

ಸಾಲದ ಹೊರೆ ಹಾಗೂ ಪಿಡ್ಸ್ನಿಂದ ಮನನೊಂದವನು ವಿಪರೀತ ಕುಡಿತದ ಚಟಕ್ಕೆ ಒಳಗಾಗಿದ್ದ ಎಂಬ ಆರೋಪ ಕೇಳಿಬಂದಿದೆ.. ಸಿದ್ದಾಪುರ ಸಾಗರಮುಖ್ಯ ರಸ್ತೆಯ ಪಕ್ಕದಲ್ಲಿರುವ ಹೊಸೂರಿನ ಪುಟ್ಟಪ್ಪನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬAಧಿಸಿದAತೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button