Big News
Trending

ಜೋಳಿಗೆ ಅಭಿಯಾನದಡಿ ಲಾಟರಿ ಮಾರಾಟ. ಸಿಗ್ಮಾ ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ಸೇರಿ 25 ಬಹುಮಾನ ! ಸಂಗಾತಿ ರಂಗಭೂಮಿಯ ಕೆ. ರಮೇಶ ವಿರುದ್ಧ ಪ್ರಕರಣ ದಾಖಲು

ಅಂಕೋಲಾ: ಜೋಳಿಗೆ ಅಭಿಯಾನದ ಹೆಸರಿನಲ್ಲಿ ಹಣ ಮಾಡುವ ಉದ್ದೇಶದಿಂದ ಲಾಟರಿಗ ಟಿಕೆಟ್ ಗಳನ್ನು ಪ್ರಿಂಟ್ ಮಾಡಿಸಿ, ಲಾಟರಿ ನಂಬರ ತಾಗಿದ್ದಲ್ಲಿ ಬಂಪರ್ ಬಹುಮಾನ ನೀಡುವುದಾಗಿ ಜನರಿಗೆ ನಂಬಿಸಿ, ವಂಚಿಸಿ ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ಸಂಗಾತಿ ರಂಗಭೂಮಿಯ ಕೆ ರಮೇಶ್ ಅವರ ಮೇಲೆ ಹೊನ್ನಳ್ಳಿಯ ಬೀರು ಬೊಮ್ಮು ಗೌಡ ವಂಚನೆಯ ದೂರು ದಾಖಲಿಸಿದ್ದಾರೆ.

ಅವರು ದೂರಿನಲ್ಲಿ ತಿಳಿಸಿದಂತೆ ತಾಲೂಕಿನ ಬಿಳಿಹೊಂಯ್ಗಿಯ ಕೆ. ರಮೇಶ್ ಅವರು ತಾನು ಪಟ್ಟಣದ ಕೆ ಎಲ್ ಇ ಕಾಲೇಜಿನ ಎದುರು ಶನಿವಾರ ಮಧ್ಯಾಹ್ನ ನಿಂತಿರುವಾಗ , ತನ್ನ ಬಳಿ ಬಂದು ಸಂಗಾತಿ ರಂಗಭೂಮಿಯ ಜೋಳಿಗೆ ಅಭಿಯಾನದ ಕಾರ್ಯಕ್ರಮ ಮಾಡಲು ಲಕ್ಕಿ ಡಿಪ್ ಲಾಟರಿ ಇಟ್ಟಿದ್ದು ,ಒಂದು ಟಿಕೆಟ್ ಲಾಟರಿಯ ಮುಖಬೆಲೆ ₹ 100 ಇದೆ ಎಂದು ಹೇಳಿದಾಗ, ನಾನು ಬೇಡ ಎಂದರೂ ಸಹ ಲಾಟರಿ ಟಿಕೇಟ್ ನ್ನು ಖರೀದಿಸಿದರೆ ಕಾರ್ಯಕ್ರಮ ಮಾಡಲು ಅನುಕೂಲ ಆಗುತ್ತದೆ ಎಂದು ದೂರುದಾರರಿಗೆ ಒತ್ತಾಯ ಪೂರ್ವಕವಾಗಿ 4 ಟಿಕೆಟ್ ನೀಡಿ 400 ರೂ ತೆಗೆದುಕೊಂಡು ಹೋಗಿದ್ದಾವೆ.

ನಂತರ ಆತ ನೀಡಿದ ಲಾಟರಿ ಟಿಕೇಟ್ ನೋಡಿದಾಗ ಅದರಲ್ಲಿ ಸಂಗಾತಿ ರಂಗಭೂಮಿ ಅಂಕೋಲಾ ಜೋಳಿಗೆ ಅಭಿಯಾನ ಹೆಸರಿನಲ್ಲಿ
ಬಲೇನೋ ಸಿಗ್ಮಾ ಕಾರು, ರಾಯಲ್ ಎನ್ ಫೀಲ್ಡ್ ಬೈಕ್, ಹೀರೋ ಬೈಕ್ ಇತ್ಯಾದಿ 25 ಬಹುಮಾನಗಳ ಯಾದಿಯನ್ನು ನೀಡಲಾಗಿದೆ. 2023ರ ಡಿಸೆಂಬರ್ 30 ರಂದು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಬರೆದಿತ್ತು.. ಆ ನಂತರ ಕೆ.ರಮೇಶ ಈತನು ಇದೇ ರೀತಿ ಹಲವರಿಗೆ ಲಾಟರಿ ಟಿಕೆಟ್ ಮಾರಾಟ ಮಾಡಿರುವುದನ್ನು ತಿಳಿದುಕೊಂಡು, ಇದು ಕಾನೂನು ಬಾಹಿರವಾಗಿರುವ ಕಾರಣ ದೂರು ನೀಡುತ್ತಿರುವುದಾಗಿ ಮತ್ತು ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button