Follow Us On

WhatsApp Group
Focus NewsImportant
Trending

ಬಾವಿಯಿಂದ ಮೇಲಕ್ಕೆ ಹತ್ತುತ್ತಿರುವಾಗ ಕೈ ಜಾರಿ ಬಿದ್ದು ವ್ಯಕ್ತಿ ಸಾವು

ಸಿದ್ದಾಪುರ: ಬಾವಿಯಿಂದ ಮೇಲಕ್ಕೆ ಹತ್ತುತ್ತಿರುವಾಗ ಕೈ ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಪಟ್ಟಣದ ಹೊನ್ನೇಗುಂಡಿಯಲ್ಲಿ ನಡೆದಿದೆ. ಪಟ್ಟಣ ವ್ಯಾಪ್ತಿಯ ರವಿಂದ್ರ ನಗರದ ನಿವಾಸಿ  ಸೇಲ್ವಾನ್ (70 ) ಮೃತ ದುರ್ದೈವಿ. ಕೂಲಿ ಕೆಲಸಕ್ಕೆ ಎಂದು ಹೋಗಿ  ಬಾವಿಯಲ್ಲಿ ಪೈಪ್ ಕಟ್ ಮಾಡಿ ಹಗ್ಗದಿಂದ ಮೇಲಕ್ಕೆ ಹತ್ತುವಾಗ ಹಗ್ಗದಿಂದ ಕೈ ಜಾರಿ ಆಳವಾದ ಬಾವಿಯಲ್ಲಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾನೆ . ಘಟನೆಗೆ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button