ಕರುಳಕುಡಿಯನ್ನೇ ಕೊಂದ ಕ್ರೂರಿಗಳು

ಮಹಾಪಾಪಿ ತಂದೆ ತಾಯಿಗಳಿವರು
40 ದಿನದ ಶಿಶುವನ್ನು ಬಾವಿಗೆ ಎಸೆದರು
ಬಯಲಾಯ್ತು ಭಯಾನಕ ಕ್ರೌರ್ಯ

[sliders_pack id=”1487″]

ಯಲ್ಲಾಪುರ: ತಂದೆ,ತಾಯಿಗೆ ಮಕ್ಕಳೆಂದರೆ ಪಂಚಪ್ರಾಣ. ಮುಗ್ದ ಮಕ್ಕಳ ಮುದ್ದಾದ ನಗು, ತುಂಟಾಟ, ಓಡಾಟ ನೋಡುವುದೇ ಚೆಂದ. ಅದರಲ್ಲೂ ಹೆತ್ತ ತಾಯಿಗೆ ತನ್ನ ಮಕ್ಕಳ ಮೇಲೆ ವಿಶೇಷ ಕಾಳಜಿ, ಮಮಕಾರ ಸಾಮಾನ್ಯ. ಆದರೆ, ಈ ದಂಪತಿ ಮಾತ್ರ ಇದಕ್ಕೆ ಅಪವಾದ. ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವನ್ನು, ಮಹಾ ಪಾಪದ ಕೆಲಸವನ್ನು ಇವರು ಮಾಡಿದ್ದಾರೆ. ಆ ದೇವರು ಇವರನ್ನು ಕ್ಷಮಿಸುವುದಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯಲದಲ್ಲಿ ಕೇಳಿಬರುತ್ತಿದೆ.

ಹೌದು, ಆ ಮಗು ಭೂಮಿಗೆ ಬಂದು ಕೇವಲ 40 ದಿನ ಆಗಿತ್ತು. ಏನೂ ಅರಿಯದ ಈ ಶಿಶುವನ್ನು ತಂದೆ-ತಾಯಿಯೇ ಬಾವಿಯಲ್ಲಿ ಎಸೆದು, ಮಹಾಕ್ರೌರ್ಯ ಮೆರೆದಿದ್ದಾರೆ. ಹೆತ್ತರ ತಂದೆ – ತಾಯಿಯೇ ಮಗಳನ್ನು ಬಾವಿಗೆ ಎಸೆದು ಕೊಲೆ ಮಾಡಿದ್ದು, ಇದು ತನಿಖೆ ವೇಳೆ ಬಯಲಾಗಿದೆ.

ಮಗು ಕಾಣೆಯಾಗಿದೆ ಎಂದು ತಂದೆ ತಾಯಿಗಳು ನಾಟಕವಾಗಿದ್ದರು. ಬಳಿಕ ಮಗು ಬಾವಿಯಲ್ಲಿ ಪತ್ತೆಯಾಗಿತ್ತು. ತನಿಖೆಯ ಜಾಡು ಹಿಡಿದ ಪೊಲೀಸರು, ಈ ಪ್ರಕರಣವನ್ನು ಬೇಧಿಸಿದ್ದು, ತಂದೆ ಮತ್ತು ತಾಯಿಯೇ, ಮಗುನ್ನು ಕೊಲೆ ಮಾಡಲು ಸಂಚುರೂಪಿಸಿರುವುದು ಬಯಲಾಗಿದೆ. ಹೆಣ್ಣು ಮಗುವೆಂದು ಪ್ರಾಣ ತೆಗೆದ ಆರೋಪಿ ತಂದೆ ಚಂದ್ರಶೇಖರ್ ಭಟ್ ಮತ್ತು ತಾಯಿ ಪ್ರಿಯಾಂಕಾ ಭಟ್ ಇವರನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version