Focus News
Trending

ಭಟ್ಕಳದಲ್ಲಿ 60 ಲಕ್ಷ ಮೌಲ್ಯದ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿ ವಶಕ್ಕೆ

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಸಿಕ್ಕಬಿದ್ದರು
ಠಾಣೆಗೆ ಕರೆತಂದ ವೇಳೆ ಸತ್ಯ ಬಯಲು

ಭಟ್ಕಳ : ತಾಲೂಕಿನ ನಗರ ಠಾಣೆ ವ್ಯಾಪ್ತಿಯ ಮುಖ್ಯ ರಸ್ತೆ ಹೂವಿನ ಚೌಕ ಕ್ರಾಸ್ ಸಮೀಪ ಬುಧವಾರ ರಾತ್ರಿ 60 ಲಕ್ಷ ಮೌಲ್ಯದ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿ ವಶಕ್ಕೆ ಪಡೆದಿದ್ದು ಇಬ್ಬರು ಆರೋಪಿಗಳನ್ನು ಭಟ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.©Copyright reserved by Vismaya tv

ಬಂಧಿತ ಆರೋಪಿ ಶೈಲೇಶ ಮಾಹಾದೇವ ಪಾಟೀಲ (33) ಹಾಗೂ ಸಂಜಯ ದೇಶಮುಖ ಎಂದು ತಿಳಿದು ಬಂದಿದ್ದು , ಇಬ್ಬರು ಆರೋಪಿತರು ಹುಬ್ಬಳ್ಳಿ ಮೂಲದವರು ಎಂದು ತಿಳಿದು ಬಂದಿದೆ .ನಿನ್ನೆ ರಾತ್ರಿ ಕೆಎ-51 ಎಮ್. ಜೆ-1092 ನಂಬರ ಕಾರಿನಲ್ಲಿ ಸುಮಾರು ಲಕ್ಷ ಮೌಲ್ಯದ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿಗಳನ್ನು ಎಲ್ಲಿಂದಲೋ ಕಳುವು ಮಾಡಿಕೊಂಡು ಮಾರಾಟಕ್ಕೆ ಹೋಗುವಾಗ ಸಂಶಯಾಸ್ಪದವಾಗಿ ತಿರುಗುತ್ತಿರುವಾಗ ನಗರ ಠಾಣೆಯ ಪಿ.ಎಸ್.ಐ ಭರತ್ ಕುಮಾರ ಹಾಗೂ ಸಿಬ್ಬಂದಿಗಳಾದ ಕೃಷ್ಣನಂದ ನಾಯ್ಕ, ಮಾಳಪ್ಪ , ಬಸವಣಿಪ್ಪಾ ಜಕಾತಿ, ಅಣ್ಣಪ್ಪ ನಾಯ್ಕ ವಿಚಾರಣೆ ನಡೆಸಿದಾಗ ಚಿನ್ನಾಭರಣ ಇರುವುದು ತಿಳಿದು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಒಂದು ಚಿನ್ನದ ಬಿಸ್ಕೆಟ್ ಹಾಗೂ 2 ಚಿನ್ನದ ಗಟ್ಟಿ, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Related Articles

Back to top button