![](http://i0.wp.com/vismaya24x7.com/wp-content/uploads/2023/07/dana-kallatana.jpg?fit=1280%2C720&ssl=1)
ಹೊನ್ನಾವರ: ಪಟ್ಟಣದ ಬಜಾರ್ ರಸ್ತೆಯಿಂದ ಗಂಧದ ಓಣಿಗೆ ಹೋಗುವ ಮಾರ್ಗದ ತಿರುವಿನಲ್ಲಿರುವ ರಸ್ತೆ ಪಕ್ಕದ ಅಂಗಡಿ ಸಮೀಪ ಗೋ ಕಳ್ಳತನ ನಡೆದಿದೆ. ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಘಟನೆಯ ಸಂಪೂರ್ಣ ದ್ರಶ್ಯ ಸೆರೆಯಾಗಿದೆ. ಬೆಳಗಿನ ಜಾವ 4:30ರ ಸುಮಾರಿಗೆ ಕಳ್ಳತನ ನಡೆದಿದೆ.
![](http://i0.wp.com/vismaya24x7.com/wp-content/uploads/2023/06/IMG-20230622-WA0020.jpg?resize=708%2C1003&ssl=1)
ಈ ಹಿಂದೆಯೂ ಅನೇಕ ಬಾರಿ ಗೋ ಕಳ್ಳತನ ಪ್ರಕರಣಗಳು ನಡೆದಿದೆ. ಇಂತಹ ಕೃತ್ಯದಲ್ಲಿ ಹಲವು ಬಾರಿ ತೊಡಗಿರುವ ತಂಡ ಎಂದು ಘಟನೆ ನೋಡಿದರೆ ಕಂಡು ಬರುತ್ತದೆ.ಪಟ್ಟಣದಲ್ಲೇ ಈ ತರಹ ಘಟನೆ ನಡೆದರೆ,ರಾತ್ರಿ ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಯಾವ ರೀತಿ ಇರಬಹುದೆಂಬ ಪ್ರಶ್ನೆ ಕಾಡುತ್ತದೆ.ಕೊಟ್ಟಿಗೆಗೆ ಬಂದು ಗೋ ಕಳ್ಳತನ ಮಾಡುವ ಖದೀಮರು ಹೆಚ್ಚುತ್ತಿದ್ದಾರೆ.ಗೋ ಪ್ರೇಮಿಗಳಲ್ಲಿ,ಸಾರ್ವಜನಿಕರಲ್ಲಿ ಇದು ಆತಂಕ ಮೂಡಿಸಿದೆ. ಖದೀಮರ ಹೆಡೆಮುರಿ ಕಟ್ಟಬೇಕಾದ ಪೊಲೀಸ್ ಇಲಾಖೆ ಆಗೊಮ್ಮೆ, ಈಗೊಮ್ಮೆ ಎಂಬoತೆ ಅಕ್ರಮ ಗೋ ಸಾಗಟ ವಾಹನ ಹಿಡಿದಿದ್ದು ಬಿಟ್ಟರೆ ಇಂತಹ ಘಟನೆಗಳ ಬಗ್ಗೆ ತಲೆಕೆಡಿಸಿಕೊಂಡoತಿಲ್ಲ ಎಂಬ ಆರೋಪ ಕೇಳಿಬಂದಿದೆ.
ವಿಸ್ಮಯ ನ್ಯೂಸ್ , ಶ್ರೀಧರ್ ನಾಯ್ಕ, ಹೊನ್ನಾವರ