ಗಣೇಶ ವಿಸರ್ಜನೆ ವೇಳೆ ಅವಾಂತರ: ಮೇಲಿನಿಂದ ಬಿದ್ದ ವ್ಯಕ್ತಿ; ಏನಾಯ್ತು?

ಹೊನ್ನಾವರ: ಸಾರ್ವಜನಿಕ ಗಣೇಶೋತ್ಸವ ಮೂರ್ತಿ ವಿಸರ್ಜನೆಗೆ ಹೋಗುವ ವೇಳೆ ಮಡಿಕೆ ಒಡೆಯುವಾಗ ಮೇಲಿಂದ ಬಿದ್ದು ವ್ಯಕ್ತಿಯೊರ್ವ ಗಾಯಗೊಂಡ ಘಟನೆ ಸಂಭವಿಸಿದೆ. ಹೌದು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಹೈವೇ ಸರ್ಕಲ್ ನವರ ಗಣೇಶ ಮೂರ್ತಿ ವಿಸರ್ಜನೆ ಹೋಗುವ ವೇಳೆ ಈ ಘಟನೆ ನಡೆದಿದೆ.

ಹೊನ್ನಾವರ ಪಟ್ಟಣದ ಮಾರ್ಕೆಟ್ ರಸ್ತೆ ತುಳಸಿ ಮೆಡಿಕಲ್ ಎದುರು ಮಡಿಕೆ ಒಡೆಯುವಾಗ ಕೆಳಗಿನಪಾಳ್ಯದ ಪಾಂಡುರAಗ ಶಂಕರ ಮೇಸ್ತಾ ಎಂಬುವನು ಆಕಸ್ಮಿಕವಾಗಿ ಮೇಲಿಂದ ಡಾಂಬರ್ ರಸ್ತೆ ಮೇಲೆ ಬಿದ್ದ ಪರಿಣಾಮ ತಲೆ ಹಾಗೂ ಬಲಗೈ ತೀವ್ರವಾಗಿ ಗಾಯಗೊಂಡಿರುತ್ತಾನೆ. ಕೂಡಲೇ ಸಮಿತಿಯವರು ಹಾಗೂ ರಿಕ್ಷಾ ಚಾಲಕರು ಅಟೋ ಮೂಲಕ ತಾಲೂಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ ಮೂಲಕ ನೆರೆ ಜಿಲ್ಲೆಗೆ ಕಳುಹಿಸಾಗಿದೆ. ನಂತರ ಗಣೇಶ ವಿಸರ್ಜನೆ ಕಾರ್ಯ ಮುಂದುವರೆಸಿಸಲಾಯಿತು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version