Follow Us On

WhatsApp Group
Important
Trending

ಕಾಣೆಯಾಗಿದ್ದಾರೆ: ವಿವಾಹಿತ ನಾಪತ್ತೆ: ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಯಲ್ಲಾಪುರ: ಕ್ಯಾಂಟೀನ್‌ನಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದ ವಿವಾಹಿತ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಹೌದು, ಇಲ್ಲಿನ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ರವೀಂದ್ರ ನಗರ ನಿವಾಸಿ ವೆಂಕಟೇಶ ಬೋವಿವಡ್ಡರ್ (25) ಕಾಣೆಯಾದ ವ್ಯಕ್ತಿ. ಈತ ಅಕ್ಟೋಬರ್ ಒಂದನೇ ತಾರೀಖಿನಿಂದು ಬೆಳಿಗ್ಗೆ ಕ್ಯಾಂಟೀನ್‌ಗೆ ಕೆಲಸಕ್ಕೆ ಬಂದು ಮಧ್ಯಾಹ್ನ ಮನೆಗೆ ಹೋಗಿ ಬರುವು ದಾಗಿ ತಿಳಿಸಿ ಹೋದವನು ಮರಳಿ ಬಂದಿಲ್ಲ.

ಪರಿಚಿತರು ಹಾಗೂ ಸಂಬoಧಿಕರಲ್ಲಿ ಎಲ್ಲ ಕಡೆ ವಿಚಾರಿಸಿದಾಗಲೂ ಆತನ ಬಗ್ಗೆ ಸುಳಿವು ದೊರಕಿಲ್ಲ ಎಂದು ಆತನ ಪತ್ನಿ ಕೀರ್ತಿ ಭೋವಿವ ಡ್ಡರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ. ಪಿಎಸ್‌ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು ಕಾಣೆಯಾದಾತನ ಪತ್ತೆಗಾಗಿ ತನಿಖೆ ನಡೆಸಿದ್ದಾರೆ. ಈತನ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಕುಟುಂಬಸ್ಥರು ಕೋರಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button