Follow Us On

Google News
Important
Trending

ಒಂಟಿ ವೃದ್ಧೆಯ ಮನೆಗೆ ನುಗ್ಗಿದ ಕಳ್ಳ: ಕೂಗಿಕೊಂಡ ಟೀವಿ ನೋಡುತ್ತಿದ್ದ ವೃದ್ಧೆ: ಕೊಲೆಗೆ ಯತ್ನ

ಭಟ್ಕಳ: ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿದ ಕಳ್ಳನೊರ್ವ ವೃದ್ಧೆಯನ್ನು ಸಾಯಿಸಿ ದರೋಡೆ ಮಾಡಲು ಯತ್ನಿಸಿದ್ದು, ಅದ್ರಷ್ಟವಶಾತ್ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಡಳ್ಳಿ ಜೋಗಿ ಮನೆ ಸಮೀಪ ನಡೆದಿದೆ. ಮನೆಯಲ್ಲಿದ್ದ ಒಂಟಿ ವೃದ್ಧೆ, ಶೋಭಾ ಎಂ ದಿಕ್ಷೀತ (71) ತಿಳಿದು ಬಂದಿದೆ. ಈಕೆಗೆ ಓರ್ವ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ ಉಡುಪಿಯಲ್ಲಿ ವಾಸವಾಗಿದ್ದ.

ಸದ್ಯ ಮನೆಯಲ್ಲಿ ವೃದ್ಧೆಯೊಬ್ಬಳೆ ವಾಸವಾಗಿದ್ದಳು. ಇದನ್ನು ಗಮನಿಸಿ ಕಳ್ಳನೊರ್ವ ಈಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮನೆಯ ಮೇಲಿನ ಬಾಲ್ಕಿನಿಯಿಂದ ಬಾಗಿಲಿನ ಕೀಲಿ ತೆಗೆದು ಮನೆಯ ಒಳಗೆ ಇಳಿದು ಬಂದಿದ್ದಾನೆ. ಈ ವೇಳೆ ಕಳ್ಳ ಮನೆಯ ಹಾಲಿನಲ್ಲಿ ಟಿ.ವಿ ನೋಡುತ್ತಾ ಕುಳಿತುಕೊಂಡಿದ್ದ ವೃದ್ಧೆಯ ಕುತ್ತಿಗೆಗೆ ಬಟ್ಟೆಯಿಂದ (ನೈಟಿ) ಸುತ್ತಿ ಎಳೆದು ಹಿಡಿದು ಕೊಲೆ ಮಾಡಲು ಯತ್ನಿಸಿದ ವೇಳೆ ವೃದ್ಧೆ ಕೂಗಿದ್ದಾಳೆ. ನಂತರ ಗಾಬರಿಯಾದ ಕಳ್ಳ ಹಾಗೆಯೇ ಬಿಟ್ಟು ಬಂದ ದಾರಿಗೆ ಸುಂಕವಿಲ್ಲ ಎಂಬoತೆ ಆರೋಪಿ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ವೃದ್ಧೆಯ ಮೂಗಿಗೆ ಚಿಕ್ಕ ಪುಟ್ಟ ಗಾಯವಾಗಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ, ಕಳೆದ 15 ದಿನದ ಹಿಂದಷ್ಟೇ ಇವರ ಮನೆಯಲ್ಲಿ ಎರಡು ಚಿನ್ನದ ಬಳೆ, ಒಂದು ಚೈನ್ ,ಒಂದು ಉಂಗುರ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಕುರಿತು ವೃದ್ಧೆಯ ಪುತ್ರ ಹರೀಶ ದೀಕ್ಷಿತ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಸಿ.ಪಿ.ಐ ಚಂದನ ಗೋಪಾಲ ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ,ಭಟ್ಕಳ

Back to top button