![](http://i0.wp.com/vismaya24x7.com/wp-content/uploads/2024/01/ankola.jpg?fit=1280%2C720&ssl=1)
ಅಂಕೋಲಾ : ಯುವಕನೋರ್ವ ತನ್ನ ಮನೆಯಲ್ಲಿ ಫ್ಯಾನಿಗೆ ಸೀರೆ ಕಟ್ಟಿ ತನ್ನ ಕುತ್ತಿಗೆಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ಬಬ್ರುವಾಡಾ ಗ್ರಾಪಂ ವ್ಯಾಪ್ತಿಯ ಶೇಡಿಕುಳಿಯಲ್ಲಿ ಸಂಭವಿಸಿದೆ. ನಾಗರಾಜ ಮೋಹನ ಖರಾಡೆ (26) ಮೃತ ದುರ್ದೈವಿ ಯುವಕನಾಗಿದ್ದಾನೆ. ವಿಪರೀತ ಸರಾಯಿ ಕುಡಿತದ ಚಟ ಹೊಂದಿದ್ದ ಎನ್ನಲಾದ ಈತ ಅದಾವುದೋ ವಿಷಯದಿಂದ ಮನನೊಂದು ಆತ್ಮಹತ್ಯಗೆ ಶರಣಾದ ಎನ್ನಲಾಗಿದ್ದು, ಪೋಲೀಸ್ ತನಿಖೆಯಿಂದ ಆತ್ಯಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
ಪಿ ಎಸ್ ಐ ಉದ್ದಪ್ಪ ಧರೆಪ್ಪ ನವರ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು,ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವಾಯ್ ನಾಯ್ಕ ಮತ್ತು ಮೃತನ ಕುಟುಂಬ ಸಂಬಂಧಿಗಳು ಸಹಕರಿಸಿದರು. ಆತ್ಮಹತ್ಯೆ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ