Follow Us On

Google News
Important
Trending

ಸಮುದ್ರದ ಸುಳಿಯಲ್ಲಿ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸುಳಿಗೆ ಸಿಲುಕಿ ಅಸ್ವಸ್ಥನಾಗಿದ್ದ ಪ್ರವಾಸಿಗನನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ಗೋಕರ್ಣದಲ್ಲಿ ನಡೆದಿದೆ. ಮಂಡ್ಯ ಮೂಲದ 21 ಪ್ರವಾಸಿಗರ ತಂಡ ಗೋಕಣದ ಓಂ ಬೀಚ್‌ನಲ್ಲಿ ಈಜಾಡುತ್ತಿತ್ತು. ಈ ವೇಳೆ 17 ವರ್ಷದ ವರದಮೂರ್ತಿ ಎಂಬಾತ ಸುಳಿಗೆ ಸಿಲುಕಿ ಅಸ್ವಸ್ಥನಾಗಿದ್ದ. ಇದನ್ನು ಗಮನಿಸಿದ ಸ್ಥಳದಲ್ಲೇ ಕರ್ತವ್ಯದಲ್ಲಿದ್ದ ಜೀವರಕ್ಷಕ ಸಿಬ್ಬಂದಿಗಳಾದ ಮಂಜೇಶ್ ಹರಿಕಾಂತ, ಹರೀಶ ಮೂಡಂಗಿ, ಪ್ರಭಾಕರ್ ಅಂಬಿಗ ತಕ್ಷಣ ಕಾರ್ಯಪ್ರವತ್ತರಾಗಿ ಆತನನ್ನು ರಕ್ಷಣೆ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Back to top button