Follow Us On

WhatsApp Group
Important
Trending

ಪೊಲೀಸ್ ಕಾನ್‌ಸ್ಟೇಬಲ್ ನಿಂದ ಯುವತಿಗೆ 18 ಲಕ್ಷ ವಂಚನೆ: ದೂರಿನಲ್ಲೇನಿದೆ ನೋಡಿ?

ಮುಂಡಗೋಡು: ಪೊಲೀಸ್ ಕಾನ್‌ಸ್ಟೇಬಲ್ ಲಕ್ಷಾಂತರ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ತಾಲೂಕಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮನೆ ಕಟ್ಟಲು ಹಣದ ಅವಶ್ಯಕತೆ ಇದೆ ಎಂದು ತನ್ನನ್ನು ನಂಬಿಸಿ ಆನ್ ಲೈನ್ ಮೂಲಕ ಹಾಗೂ ನಗದು ಸೇರಿ ಒಟ್ಟು 18 ಲಕ್ಷ ಹಣವನ್ನು ತೆಗೆದುಕೊಂಡು ಚೆಕ್‌ಗಳನ್ನು ನೀಡಿದ್ದೆ. ಆದರೆ ಈವರೆಗೂ ಹಣವನ್ನು ಮರಳಿ ನೀಡದೆ ನಂಬಿಸಿ ಮೋಸ ಮಾಡಿರುವುದಾಗಿ ಯುವತಿ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಹೌದು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತರುವ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮ ನಿವಾಸಿ ಗಿರೀಶ ಎಸ್.ಎಮ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದೊಡ್ಡೇರಿ ಗ್ರಾಮ ಯುವತಿ ಸುಚಿತ್ರ ಎಮ್.ಆರ್ ನಂಜೇರಾಜನ್ ಪ್ರಕರಣ ದಾಖಲಿಸಿದ ಯುವತಿ ಎಂದು ತಿಳಿದು ಬಂದಿದೆ. ದೂರು ದಾಖಲಾಗುತ್ತಿದ್ದಂತೆ ಕಾನ್‌ಸ್ಟೇಬಲ್ ಗಿರೀಶ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ..

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button