Follow Us On

Google News
Important
Trending

ಕಾರಿನ ಮೇಲೆ ಮರಬಿದ್ದು ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಸಿದ್ದಾಪುರ: ಕಾರಿನ ಮೇಲೆ ಮರ ಬಿದ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ದೇವರಾಜ ಅಯ್ಯಪ್ಪ ನಾಯ್ಕ (59) ಮೃತ ದುರ್ದೈವಿ. ಆಡುಕಟ್ಟಾ ಕಡೆಯಿಂದ ಸಾಗರ ಕಡೆಗೆ ಕಾರಿನಲ್ಲಿ ಮೂವರು ಪ್ರಯಾಣ ಮಾಡುತ್ತಿರುವಾಗ ಭಾರಿ ಗಾಳಿ ಮಳೆಯಿಂದ ಮರವು ಕಾರಿನ ಮೇಲೆ ಬಿದ್ದು ದೇವರಾಜ ಎನ್ನುವವರಿಗೆ ಗಂಭೀರ ಗಾಯವಾಗಿತ್ತು. ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಚಿಕಿತ್ಸೆ ಫಲಿಸದೆ ಮೃತ ಪಟ್ಟಿರುವುದಾಗಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button