ಟ್ರ್ಯಾಕ್ಟರ್ ಹಲ್ಲಿಗೆ ಸಿಲುಕಿಕೊಂಡ ಕೂಲಿ ಕಾರ್ಮಿಕ : ಗಂಭೀರವಾಗಿ ಗಾಯಗೊಂಡು ಸಾವು

ಬಡ ಕುಟುಂಬಕ್ಕೆ ಬೇಕಿದೆ ನೆರವಿನ ಸಾಂತ್ವನ

ಅಂಕೋಲಾ: ಗದ್ದೆ ಹೂಡುತ್ತಿರಬೇಕಾದರೆ ಕೂಲಿ ಕಾರ್ಮಿಕನೋರ್ವ, ಆಕಸ್ಮಿಕವಾಗಿ ಟ್ರ್ಯಾಕ್ಟರ್ ಹಲ್ಲಿಗೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟ ಧಾರುಣ ಘಟನೆ ತಾಲೂಕಿನ ಮೊಗಟಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಅಂಕೋಲಾ ತಾಲೂಕಿನ ಮೊರಳ್ಳಿ – ಮಾಣಿಗುಡ್ಡಾ ನಿವಾಸಿ ನಾಗರಾಜ ತಿಮ್ಮಪ್ಪ ಗೌಡ (37) ಮೃತ ದುರ್ದೈವಿಯಾಗಿದ್ದಾನೆ.

ಬೆಳ್ಳಂಬೆಳಿಗ್ಗೆ ಮನೆ ಬಾಗಿಲು ತೆಗೆದಾಗ ಶಾಕ್! ಬಾಗಿಲ ಮುಂದೆಯೇ ಮೊಸಳೆ ಪ್ರತ್ಯಕ್ಷ

ನಾಗರಾಜ ಗೌಡ ಈತನು,ಊರಿನಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಅವರಿವರು ಗದ್ದೆ- ತೋಟದ ಕೆಲಸಕ್ಕೆ ಕರೆದರೆ ಹೋಗಿ ಬಂದು, ತಾನು ದುಡಿದು ಸಂಪಾದಿಸಿದ ಕೂಲಿ ಹಣದಿಂದ ತನ್ನ ಸಂಸಾರ ಜವಾಬ್ದಾರಿ ನಿಭಾಯಿಸುತ್ತಿದ್ದ. ಮೊರಳ್ಳಿಯ ಹೊನ್ನುನ ತೇರು ನಲ್ಲಿರುವ ಸುರೇಶ ನಾಯಕ ಇವರ ಗದ್ದೆಯಲ್ಲಿ,ಟ್ರ್ಯಾಕ್ಟರ್ ನಿಂದ ಗದ್ದೆ ಹೂಡುತ್ತಿರಬೇಕಾದರೆ,ಆಕಸ್ಮಿಕವಾಗಿ ಟ್ರ್ಯಾಕ್ಟರ್ ಹಲ್ಲಿಗೆ ಸಿಲುಕಿ, ಕಾಲಿಗೆ ,ತೊಡೆಗೆ ಗಂಭೀರ ಗಾಯವಾಗಿ ಮೃತಪಟ್ಟ ಬಗ್ಗೆ, ಮೃತನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ,ಕಾನೂನು ಕ್ರಮ ಮುಂದುವರಿಸಿದ್ದಾರೆ.

ಮನೆಗೆ ಆಧಾರಸ್ತಂಭವಾಗಿದ್ದ ನಾಗರಾಜ ಗೌಡ ನ ಅಕಾಲಿಕ ಸಾವು, ಆತನ ಕುಟುಂಬದಲ್ಲಿ ಕಣ್ಣೀರು ಕೋಡಿ ಹರಿಸಿದ್ದು, ನೊಂದ ಈ ಬಡ ಕುಟುಂಬಕ್ಕೆ ಸರ್ಕಾರ ಮತ್ತು ಸಂಬಂಧಿಸಿದವರು ಮಾನವೀಯ ನೆಲೆಯಲ್ಲಿ ಪರಿಹಾರ ನೀಡಿ, ಸಾಂತ್ವನ ಹೇಳಬೇಕಿದೆ. ನಾಗರಾಜ ಗೌಡ ನ ಅಕಾಲಿಕ ನಿಧನದ ಸುದ್ದಿ ತಿಳಿದ ಶಾಸಕ ಸತೀಶ ಸೈಲ್, ಬಡ ಕೂಲಿ ಕಾರ್ಮಿಕನ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ವೈಯಕ್ತಿಕವಾಗಿ ನೆರವು ನೀಡುವ ಹಾಗೂ ಸರ್ಕಾರದಿಂದ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version