Follow Us On

WhatsApp Group
Big News
Trending

Uttara Kannada News: ಉತ್ತರ ಕನ್ನಡ ಸುದ್ದಿಗಳು

ಕಾರವಾರ: ಮಹಿಳೆಯೋರ್ವಳ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾರವಾರ ತಾಲೂಕಿನ ಶಿರವಾಡ ಬಳಿ ನಡೆದಿದೆ. ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಘಟನೆ ನಡೆದಿದೆ. ಕಿನ್ನರ ಮೂಲದ ಸಂಜನಾ ಗಜಾನನ ತಳೆಕರ(35) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಯಲ್ಲಾಪುರ: ದನ ಮೇಯಿಸುತ್ತಿದ್ದ ಮಹಿಳೆ ಹಾಗೂ ಪುರುಷನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಸಮೀಪದ ಸರಳಕಂಡದ ಬಳಿ ನಡೆದಿದೆ. ಕಾರೆಮನೆಯ ನಕ್ಕಲಿ ಜಾನು ಗೌಳಿ ಹಾಗೂ ಸೆಳೆಬೈಲಿನ ಕೇಶವ ಗೌಳಿ ಗಾಯಗೊಂಡವರು. ಮಹಿಳೆ ದನ ಮೇಯಿಸುತ್ತಿದ್ದಾಗ ಏಕಾಏಕಿ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ.

ಇದನ್ನು ಕಂಡ ಕೇಶವ ಗೌಳಿ ಆಕೆಯನ್ನು ರಕ್ಷಿಸಲು ಹೋಗಿದ್ದು, ಅವರ ಮೇಲೂ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ. ಗಾಯಾಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button