ತಡರಾತ್ರಿ ಕಾರಿನಲ್ಲಿ ಬಂದು ಗೋಕಳ್ಳತನ : ದೇವಸ್ಥಾನದ ಎದುರು ಮಲಗಿದ್ದ ಜಾನುವಾರು ಅಪಹರಣ

ಕುಮಟಾ: ಯಾರೋ ಕಳ್ಳರು ಮಲಗಿದ್ದ ಎರಡು ಎತ್ತುಗಳನ್ನು ಕಾರಿನಲ್ಲಿ ತುಂಬಿಕೊoಡು ಕಳ್ಳತನ ಮಾಡಿರುವ ಘಟನೆ ಕುಮಟಾ ತಾಲೂಕಿನ ಹೆಗಡೆ ಶ್ರೀ ಶಾಂತಿಕಾoಬ ದೇವಸ್ಥಾನದ ಎದುರಿನ ರಥಬೀದಿಯಲ್ಲಿ ಅಕ್ಟೋಬರ್ 9ರ ತಡರಾತ್ರಿ ನಡೆದಿದೆ. ತಡರಾತ್ರಿ ಬಿಳಿಯ ಬಣ್ಣದ ಕಾರಿನಲ್ಲಿ ಬಂದ ಗೋಕಳ್ಳರು ಎರಡು ಎತ್ತುಗಳನ್ನು ತುಂಬಿಕೊoಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಪವನ್ ಪ್ರಭು ಎಂಬುವವರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ್ ದಿವಗಿ, ಕುಮಟಾ

Exit mobile version