Join Our

WhatsApp Group
Big News
Trending

ಮನೆ ಹಿಂದಿನ ಶೆಡ್ಡಿಗೆ ನುಗ್ಗಿ ಅಡಿಕೆ ಕಳ್ಳತನ

ಯಲ್ಲಾಪುರ: ಮನೆ ಹಿಂದಿನ ಶೆಡ್ಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾದ ಘಟನೆ ಯಲ್ಲಾಪುರ ತಾಲೂಕಿನ ಇಡಗುಂದಿಯ ಜೋಗದಮನೆಯಲ್ಲಿ ನಡೆದಿದೆ. ಗೋಪಾಲಕೃಷ್ಣ ಹೆಬ್ಬಾರ್ ಎನ್ನುವವರ ಮನೆಯ ಹಿಂಬದಿಯ ಶೆಡ್‌ನಲ್ಲಿ ಇಟ್ಟಿದ್ದ ಸುಮಾರು 1.40 ಲಕ್ಷ ರೂಪಾಯಿ ಮೌಲ್ಯದ 7 ಕ್ವಿಂಟಾಲ್‌ಗೂ ಅಧಿಕ ಅಡಿಕೆ ಕಳ್ಳರ ಪಾಲಾಗಿದೆ.

ಗೋಪಾಲಕೃಷ್ಣ ಹೆಬ್ಬಾರ್ ಅವರು ಯಲ್ಲಾಪುರದ ಇಡಗುಂದಿಯ ಜೋಗದಮನೆಯಲ್ಲಿ ವಾಸವಾಗಿದ್ದರು. ಇಳಿ ವಯಸ್ಸಿನಲ್ಲಿಯೂ ಅವರು ಕೃಷಿ-ತೋಟಗಾರಿಕೆ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದಾಗಿಯೂ ಅವರು ತಮ್ಮ ಮನೆಯ ಶೆಡ್‌ನಲ್ಲಿ ಜೋಪಾನ ಮಾಡಿದ್ದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ತಗಡಿನ ಶೆಡ್ಡಿನ ಒಳಗಿರಿಸಿದ್ದ 1.40 ಲಕ್ಷ ರೂ ಮೌಲ್ಯದ 7 ಕ್ವಿಂಟಲ್ ಅಡಿಕೆ ಕಳ್ಳತನ ನಡೆದ ಬಗ್ಗೆ ಅವರು ಪೋಲೀಸ್ ದೂರು ನೀಡಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button