Join Our

WhatsApp Group
Important
Trending

ಪತ್ನಿಯನ್ನು ಹುಡುಕುತ್ತಿದ್ದಾಗ ಆಸ್ಪತ್ರೆಯಿಂದ ಬಂತು ಸಾವಿನ ಸುದ್ದಿ : ಅಕ್ಷತಾ ಮೃತದೇಹ ನೋಡಿ ಬಿಕ್ಕಿಬಿಕ್ಕಿ ಅತ್ತ ಪೋಷಕರು

ಸಿದ್ದಾಪುರ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಆರ್ ಸಿ ಬಿ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತದ ವೇಳೆ ಮೃತಪಟ್ಟ 11 ಜನರಲ್ಲಿ ಓರ್ವಳು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಮಹಿಳೆ. ಹೌದು, ಸಿದ್ದಾಪುರ ಮೂಲದ ಅಕ್ಷತಾ ಆಶಯ ಅಂಬಳ್ಳಿ ಮೃತ ದುರ್ದೈವಿ.. ಮೂಲತಃ ಉಡುಪಿ ಜಿಲ್ಲೆ ಮೂಲ್ಕಿಯವರಾದ ಅಕ್ಷತಾ ವಿವಾಹವಾಗಿ ಒಂದುವರೆ ವರ್ಷ ಆಗಿತ್ತು. ಗಂಡ ಹೆಂಡತಿ ಇಬ್ಬರು ಬೆಂಗಳೂರುನಲ್ಲಿ ನೆಲೆಸಿದ್ದರು.

ಆದ್ರೆ, ಆರ್ ಸಿ ಬಿ ವಿಜಯೋತ್ಸವ ನೋಡಲು ಹೋಗಿದ್ದ ಸಂದರ್ಭದಲ್ಲಿ ಮೃತ ಪಟ್ಟಿದ್ದಾರೆ. ಮೃತಳ ಪಾರ್ಥಿವ ಶರೀರವನ್ನ ಸಿದ್ದಾಪುರದ ರವೀಂದ್ರ ನಗರದ ನಿವಾಸದಲ್ಲಿ ಗಣ್ಯರು ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನಿAದ ಮೃತ ದೇಹ ಹೊತ್ತ ಆಂಬುಲೆನ್ಸ್ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಕಳೆದ ಮಂಗಳವಾರವಷ್ಟೇ ಸಿದ್ದಾಪುರದಿಂದ ಬೆಂಗಳೂರುಗೆ ತೆರಳಿದ್ದರು. ಇದನೆಲ್ಲ ನೆನೆಸುತ್ತ ಕುಟುಂಬದವರು ಕಣ್ಣೀರಿಟ್ಟ ದೃಶ್ಯ ಮನ ಕಲುಕಿತು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Back to top button