
ಭಟ್ಕಳ: ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಆಚರಣೆ ಅಂಗವಾಗಿ ಕರಾವಳಿ ಕಾವಲು ಪಡೆ ಠಾಣೆಯ ಠಾಣಾಧಿಕಾರಿ ಕುಸುಮಾದರ ಕೆ ನೇತೃತ್ವದಲ್ಲಿ ತಾಲೂಕಿನ ವಿವಿಧ ಕಡೆ ಮಾದಕ ವಸ್ತು ಸೇವನೆಯ ವಿರುದ್ಧ ಜನಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.
ಮಾವಿನಕುರ್ವೆ ಪಂಚಯತ ವ್ಯಾಪ್ತಿಯ ತಲಗೋಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೆರವಣಿಗೆ ಕಾರ್ಯಕ್ರಮವನ್ನು ಏರ್ಪಡಿಸಿ ಮಾದಕ ವಸ್ತು ಸೇವನೆಯ ಕುರಿತಾಗಿ ಅರಿವು ಮೂಡಿಸಲಾಯಿತು. ಮುರುಡೇಶ್ವರದ ಸಣಬಾವಿ ಹಾಗೂ ಅಳ್ವೆಕೋಡಿಯಲ್ಲೂ ಜನಜಾಗೃತಿ ಮೂಡಿಸಲಾಯಿತು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ