
ಭಟ್ಕಳ: ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೈಲೂರಿನ ರೇಲ್ವೇ ಹಳಿ ಬಳಿ ನಡೆದಿದೆ. ಗಾಯಗೊಂಡ ಲಾರಿ ಚಾಲಕನನ್ನು ಕ್ರೀಪಾಲ್ ಸಿಂಗ್ (30) ವಡಾಲ ಗುಜರಾತ ಎಂದು ಗುರುತಿಸಲಾಗಿದೆ.
ಈತ ಕೊಂಕಣ ರೇಲ್ವೆಯ ರೋರೋ ರೈಲಿನಲ್ಲಿ ಸರಕು ತುಂಬಿದ ಲಾರಿ ಚಾಲಕನಾಗಿದ್ದು, ಗುಜರಾತಿನಿಂದ ಸುರತ್ಕಲ್ ಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ರೈಲಿನಿಂದ ನೆಲಕ್ಕುರುಳಿ ಬಿದ್ದಿದ್ದಾನೆ.
ಇದರ ಪರಿಣಾಮ ಈತನ ತಲೆಗೆ ಗಂಭೀರ ಗಾಯವಾಗಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರುಡೇಶ್ವರ ಪಿ.ಎಸ್.ಐ. ಸಿ.ಆರ್. ಪುಟ್ಟಸ್ವಾಮಿ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ ಸುಸಜ್ಜಿತ 2 ಮಳಿಗೆಗಳು ಬಾಡಿಗೆಗೆ ಇದೆ
- ಗಮನಸೆಳೆಯುತ್ತಿದೆ ಅಂಕೋಲಾದ ಶ್ರೀ ಸಿಗಂಧೂರೇಶ್ವರಿ ಟೆಕ್ಸ್ ಟೈಲ್ : 200 ರಿಂದ ಹಿಡಿದು 8 ಸಾವಿರ ಮೌಲ್ಯದ ವಿವಿಧ ಬಗೆ ಬಗೆಯ ಸೀರೆಗಳು
- ಕರಾವಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ