Follow Us On

WhatsApp Group
Big News
Trending

ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ಹೊನ್ನಾವರ ಹುಡುಗಿಯ ಬದುಕಿನ ಕಥೆ ಅನಾವರಣ

ದಣಿವರಿಯದೇ ದುಡಿಯುತ್ತಿದ್ದಾಳೆ ಹೆಣ್ಣುಮಗಳು
ಕಡುಕಷ್ಟದಲ್ಲೂ ಭರವಸೆಯ ಬೆಳಕು

[sliders_pack id=”1487″]

ಹೊನ್ನಾವರ: ಪಟ್ಟಣದ ರಾಯಲಕೇರಿಯ ಅಶೋಕ ಜಾದೂಗಾರ ತಮ್ಮ ಜಾದೂವಿನ ಮೂಲಕ ತಾಲೂಕು, ಜಿಲ್ಲೆ, ರಾಜ್ಯಾದ್ಯಂತ ತಮ್ಮದೆ ಆದ ಚಾಪನ್ನು ಮೂಡಿಸಿದ್ದಾರೆ. ಆರ್ಥಿಕವಾಗಿ ಮನೆಯಲ್ಲಿ ಬಡತನವಿದ್ದರೂ ಮಡದಿಯೋಂದಿಗೆ ಜಾತ್ರೆ, ಯಕ್ಷಗಾನ ಮುಂತಾದ ಕಾರ್ಯಕ್ರಮದಲ್ಲಿ ಗೋಬಿ ಮಂಚೂರಿ ಅಂಗಡಿ, ಕಬ್ಬಿನ ಜ್ಯೂಸ್ ವ್ಯಾಪಾರ ನಡೆಸುತ್ತಿದ್ದರು. ಅಶೋಕ ಜಾದೂಗಾರ ಅವರು ಕಾರ್ಯಕ್ರಮಗಳಲ್ಲಿ ಅದ್ಬುತ ಜಾದೂ ಪ್ರದರ್ಶನ ನೀಡಿದರೆ, ಇವರ ದರ್ಮಪತ್ನಿಯು ಸಹ ಪತಿಯ ಹೆಗಲಿಗೆ ಹೆಗಲು ಕೋಟ್ಟು ಹಗಲು ರಾತ್ರಿ ದುಡಿದು ಜೀವನ ಸಾಗಿಸಿಕೊಂದು ಬಂದಿದ್ದಾರೆ. ಇವರ ಮಗ ಶ್ರೀರಾಮ ಜಾದುಗಾರ ಅವರು ಸಹ ತಂದೆಯೊಟ್ಟಿಗೆ ಜಾದೂ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸೇರಿದಂತೆ, ಜಾತ್ರೆ, ವಿವಿದ ಕಾರ್ಯಕ್ರಮಗಳಲ್ಲಿ ಗೋಬಿ, ಕಬ್ಬಿನ ಹಾಲಿನ ಅಂಗಡಿಗಳನ್ನಿಟ್ಟುಕೊಂಡು, ತಮ್ಮ ಪ್ರತಿಭೆಯ ಮೂಲಕ ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೆಗ್ ಬಂದ ಕಾರ್ಯಕ್ರಮದಲ್ಲಿ ಬಾಗವಹಿಸಿ ಕರ್ನಾಟಕದ ಜನತೆಯ ಮನ ಗೆದ್ದಿದ್ದಾರೆ. ಇದೀಗ ಅಶೋಕ ಜಾದೂಗಾರ ಅವರ ಮಗಳು ಸುವರ್ಣ ವಾಹಿನಿಯಲ್ಲಿ ಪ್ರಸಾರರವಾಗುವ ಸುವರ್ಣ ಸೂಪರಸ್ಟಾರ್ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದು, ಆ ಒಂದು ಕಾರ್ಯಕ್ರಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಕಡು ಕಷ್ಟದಲ್ಲೂ ಬದುಕಿನ ಬಗ್ಗೆ ಬೇಸರ ತಾಳದೇ ಅನುದಿನವೂ ನಾಳೆಯ ಭರವಸೆಯ ಬೆಳಕನ್ನು ನಿರೀಕ್ಷಿಸುತ್ತಾ ದಣಿವರಿಯದೇ ದುಡಿಯುತ್ತಿದ್ದ ಹೆಣ್ಣುಮಗಳ ಜೀವನಗಾಥೆ, ಕಷ್ಟ ನಷ್ಟಕ್ಕೆ ಬೇಸತ್ತು ಬದುಕೇ ಸಾಕು ಎಂದುಕೊಳ್ಳುತ್ತಿರುವ ಹಲವರಿಗೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ದೃಶ್ಯರೂಪದಲ್ಲಿ ಕಿರುತೆರೆಯಲ್ಲಿ ಮೂಡಿಬರಲಿದ್ದಾರೆ ಅನು ಹೊನ್ನಾವರ. ಗಿರೀಶ ಗೌಡ ಪ್ರೋಗ್ರಾಮ್ ಹೆಡ್ ಆಗಿರುವ ಪ್ರದೀಪ ಭಟ್ ನಿರ್ದೇಶನದಲ್ಲಿ ಶಾಲಿನಿ ಅವರ ನಿರೂಪಣೆಯಲ್ಲಿ ಮೂಡಿಬರುವ ವಿನೂತನ ಕಲ್ಪನೆಯ ಸುವರ್ಣ ಸೂಪರ್‍ಸ್ಟಾರ್ ಕಾರ್ಯಕ್ರಮಕ್ಕೆ ಅರ್ಹರ ತಲಾಶ್‍ನಲ್ಲಿರುವಾದ, ಈ ಹಿಂದೆ ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋದಲ್ಲಿ ಸ್ಪರ್ದಾಳುವಾಗಿದ್ದು ಹೊನ್ನಾವರದ ಶ್ರೀರಾಮ ಜಾದೂಗಾರ ಮತ್ತು ತಾಲೂಕಿನ ಸಹೃದಯಿ ಛಾಯಾಗ್ರಾಹಕ ಆರ್.ಕೆ.ಮೇಸ್ತ ಅವರು ಎಲೆಮರೆಯ ಕಾಯಿಯಂತಿದ್ದ ಕಷ್ಟದ ಬದುಕನ್ನು ಸಮಾಜದೆದುರು ತೆರೆದಿಡುವ ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿ ಸ್ಟಾರ್ ಸುವರ್ಣ ತಂಡಕ್ಕೆ ಲೀಲಾವತಿ ಹೆಸರನ್ನು ಸೂಚಿಸಿ ಮಾಡಿ ಕಿರಣ ಮೇಸ್ತ, ಕೇಶವ ಮೇಸ್ತ ಮುಂತಾದವರ ಸಹಕಾರ ಪಡೆದು ಅವಕಾಶ ಗಿಟ್ಟಿಸಿಕೊಳ್ಳಲು ಕಾರಣರಾಗಿದ್ದಾರೆ.

ಈ ಸಂಬಂಧ ಅನು ಹೊನ್ನಾವರ ಇವರ ಸಹೋದರನಾದ ಶ್ರೀರಾಮ ಹೊನ್ನಾವರ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಹಳ್ಳಿಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋನಲ್ಲಿ ನಾನು ಭಾಗವಹಿಸಿದಂತಹ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಜನ ನನಗೆ ಪ್ರೀತಿಯಿಂದ ಆಶಿರ್ವದಿಸಿದ್ದಾರೆ. ಅಂತೆಯೇ ಡಿಸೆಂಬರ್ 5 ರ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸುವರ್ಣ ಸೂಪರಸ್ಟಾರ್ ವೇದಿಕೆಯಲ್ಲಿ ನನ್ನ ಸಹೋದರಿ ಅನು ಹೊನ್ನಾವರ ಕಾಣಿಸಿಕೊಳ್ಳಲಿದ್ದು, ಅವಳಿಗೂ ಸಹ ನಿಮೆಲ್ಲರ ಆಶಿರ್ವಾದ ಅವಶ್ಯವಿದೆ. ನಮ್ಮ ಜಿಲ್ಲೆಯಿಂದ ಸುವರ್ಣ ಸೂಪರಸ್ಟಾರ್‍ಗೆ ಹೋಗಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಬಹುದು. ನಿಮ್ಮನ್ನು ಕಳುಹಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.

ಕಷ್ಟದ ದಿನಗಳಲ್ಲಿ ಜೀವನ ನಡೆಸಿದ ನನಗೆ ಒಂದು ಉತ್ತಮವಾದ ಜೀವನ ರೂಪಿಸಿಕೊಳ್ಳಲು ಕಾರಣರಾದವರು ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನತೆ. ಇದುವರೆಗೆ ನನಗೆ, ನನ್ನ ಮಗನಾದ ಶ್ರೀರಾಮ ಜಾಗುಗಾರ ಇತನಿಗೆ ಯಾವ ರೀತಿ ಪ್ರೋತ್ಸಾಹ ನೀಡಿದ್ದಿರೋ ಅದೇ ರೀತಿ ನನ್ನ ಮಗಳಾದ ಅನು ಹೊನ್ನಾವರ ಇವಳಿಗೂ ಪ್ರೋತ್ಸಾಹಿಸಿ ಆಶಿರ್ವದಿಸಬೇಕು- ಅಶೋಕ ಜಾದೂಗಾರ, ತಂದೆ

ಸ್ಟಾರ್ ಸುವರ್ಣ ವಾಹಿನಿಯವರು ನಡೆಸುತ್ತಿರುವ ಸುವರ್ಣ ಸೂಪರಸ್ಟಾರ್‍ನಂತಹ ದೊಡ್ಡ ವೇದಿಕೆಯಲ್ಲಿ ನಾನು ಭಾಗವಹಿಸುತ್ತೆನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸಮಸ್ತ ಜನತೆಯೂ ಸಹ ಡಿಸೆಂಬರ್ 5 ರ ಸಂಜೆ 5 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸುವರ್ಣ ಸೂಪರಸ್ಟಾರ್ ಕಾರ್ಯಕ್ರಮವನ್ನು ವಿಕ್ಷಿಸಿ ನನ್ನನ್ನು ಆಶೀರ್ವದಿಸಿ.: – ಅನು ಹೊನ್ನಾವರ,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button