
ಕ್ಷುಲ್ಲಕ ವಿಷಯಕ್ಕಾಗಿ ನಡೆಯಿತು ಜಗಳ
ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಹೊನ್ನಾವರ: ಜಾಗದ ವಿಷಯಕ್ಕೆ ಸಂಬoಧಪಟ್ಟoತೆ ತಮ್ಮ ತನ್ನ ಸ್ವಂತ ಅಕ್ಕಮನ ಮೇಲೇಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಹೊನ್ನಾವರ ತಾಲೂಕಿನ ಗುಣವಂತೆ ಕೆರೆಮೂಲೆಯಲ್ಲಿ ನಡೆದಿದೆ. ಜಾಗಕ್ಕೆ ಸಂಬoಧಪಟ್ಟoತೆ ಈಗಾಗಲೇ ಪ್ರಕರಣವು ನ್ಯಾಯಾಲಯದಲ್ಲಿದ್ದು, ಈ ಜಾಗದಲ್ಲಿರುವ ಗೇರುಮರವನ್ನು ಕಡಿಯಲಾಗುತ್ತಿತ್ತು. ಇದನ್ನು ಕಂಡ ವೆಂಕಮ್ಮ ಶಿವಾನಂದ ದೇಶಭಂಡಾರಿ ಎನ್ನುವ ಮಹಿಳೆ ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಈ ವೇಳೆ ಸೋದರ ಶಶಿಕಾಂತ ಗಂಗಾಧರ ದೇಶಭಂಡಾರಿ ಮತ್ತು ಅವನ ಪತ್ನಿ ಶಶಿಕಲಾ ದೇಶಭಂಡಾರಿ ಎನ್ನುವವರು, ನೀನು ಯಾರು ನನ್ನನ್ನು ಕೇಳುವವರು ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲೆ ನಡೆಸಿ, ಕಟ್ಟಿಗೆಯಿಂದ ತಲೆ ಹಾಗೂ ಕೈಗೆ ಗಾಯಗೊಳಿಸಿದ್ದಾರೆ ಎನ್ನಲಾಗಿದೆ.
ಈ ಸಂಬoಧ ಮಂಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ವೆಂಕಮ್ಮನ ಮನೆಯವರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಈ ಸಂದರ್ಭದಲ್ಲಿ ಹಲ್ಲೆಗೋಳಗಾದ ವೆಂಕಮ್ಮ ಶಿವಾನಂದ ದೇಶಭಂಡಾರಿ ಮಾತನಾಡಿ ತಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದಾರೆ: ಇಂದೇ ಅರ್ಜಿ ಸಲ್ಲಿಸಿ
- ಎ.ಎಸ್ ಐ ಮನೆಯಲ್ಲಿ ಕಳ್ಳತನ: ಚಿನ್ನಾಭರಣ ,ಬೆಳ್ಳಿ ವಸ್ತು ಹಾಗೂ ನಗದು ಸೇರಿ ಲಕ್ಷಂತರ ಮೌಲ್ಯದ ನಗ-ನಾಣ್ಯ ಕದ್ದ ಕಳ್ಳನಾರು ?
- ತರಂಗ ಫರ್ನಿಚರ್ ಫೆಸ್ಟಿವಲ್ ವಿಸ್ತರಣೆ: ಗೃಹಪ್ರವೇಶದ ಗ್ರಾಹಕರಿಗೆ ವಿಶೇಷ ಕೊಡುಗೆ
- ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಲೇ ಎಚ್ಚೆತ್ತುಕೊಂಡ ವ್ಯವಸ್ಥೆ : ತಹಶೀಲ್ದಾರ್ ಕಾರ್ಯಾಲಯದಲ್ಲಿ ಮತ್ತೆ ಆರಂಭವಾದ ಆಧಾರ್ ಕಾರ್ಡ್ ನವೀಕರಣ ಮತ್ತು ತಿದ್ದುಪಡಿ ವ್ಯವಸ್ಥೆ
- ಹ್ಯಾಕರ್ ಗಳ ಪಾಲಾಯಿತೇ ಬ್ಯಾಂಕಿಂಗ್ ವ್ಯವಹಾರ ?ಅಂಕೋಲಾ ಅರ್ಬನ್ ಬ್ಯಾಂಕ್ ಖಾತೆಗೆ ಬಿತ್ತೇ ಕನ್ನ ?