Follow Us On

WhatsApp Group
Important
Trending

ಉತ್ತರಕನ್ನಡದ ಹಲವೆಡೆ ಲಘು ಭೂಕಂಪನದ ಅನುಭವ; ನಿದ್ದೆಯಿಂದ ಎದ್ದು ಕುಳಿತ ಜನತೆ

ಶಿರಸಿ-ಸಿದ್ದಾಪುರ: ಗುರುವಾರ ರಾತ್ರಿ 10.20 ರ ಸಮಯಕ್ಕೆ ತಾಲೂಕಿನ ಬೆಂಗಳೆ ಭಾಗದಲ್ಲಿ ಬಾಗಿಲು-ಕಿಟಕಿ ಬಡಿದ ಸದ್ದಾಗಿ, ಲಘು ಭೂಕಂಪನದ ಅನುಭವ ಜನರಿಗಾಗಿದ್ದು, ಮಲಗಿದ್ದ ಜನರು ಒಮ್ಮೆ ಎದ್ದು ಕುಳಿತು ಹೌಹಾರಿದ ಘಟನೆ ನಡೆದೆ. ರಾತ್ರಿ 10.30 ರಿಂದ 10.40 ಹೊತ್ತಿಗೆ ಮನೆಯ ಕಿಡಕಿಯನ್ನು ಯಾರೋ ಬಡಿದ ಸದ್ದು ಕೇಳಿಸಿದ್ದು ಜನರು ಕಂಗಾಲಾಗಿದ್ದರು.

ತಾಲೂಕಿನ ಬನವಾಸಿಯಲ್ಲಿಯೂ ಸಹ ಅದೇ ಸಮಯಕ್ಕೆ ಬಲವಾದ ಶಬ್ಧವೊಂದು ಕೇಳಿಸಿದ್ದು, ಜನರು ತುಸು ಆತಂಕಕ್ಕೆ ಒಳಗಾಗಿದ್ದಾರೆ‌. ಜಿಲ್ಲೆಯ ಸಿದ್ದಾಪುರದ ಹೆಗ್ಗರಣಿ ಭಾಗದಲ್ಲಿ ಸಹ ಕೆಲವೆಡೆ ಭೂಕಂಪನದ ಅನುಭವ ಬಂದಿದೆ. ಶಿವಮೊಗ್ಗದಲ್ಲಿಯೂ ಸಹ ಭೂಕಂಪನದ ತೀವ್ರತೆ ಹೆಚ್ಚಿತ್ತು ಎಂದು ಹೇಳಲಾಗಿದೆ.

ಇದು ಭೂಕಂಪನವೋ ಅಥವಾ ಇನ್ನಾವುದೋ ಕಾರಣಕ್ಕೆ ಆಗಿರುವುದೋ ಎಂದು ಇನ್ನೂ ತಿಳಿದುಬಂದಿಲ್ಲ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button