ಶತಾಯುಷಿ ಗಣೇಶ ಹೆಗಡೆ ಇನ್ನಿಲ್ಲ

ಹೊನ್ನಾವರ: ಹೆರಾವಲಿ ಗ್ರಾಮದ ಅಪಗಾಲ ಊರಿನ ನಿವಾಸಿ ಗಣೇಶ ಹೊನ್ನಪ್ಪ ಹೆಗಡೆ(101) ಮಂಗಳವಾರ ಸಾವನ್ನಪ್ಪಿದ್ದಾರೆ. ಮೃತರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ನಾಗರಾಜ ಹೆಗಡೆ ಅಪಗಾಲ ಸೇರಿದಂತೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ದಿ.ಗಣೇಶ ಹೆಗಡೆ ಅಪಗಾಲಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾಗಿದ್ದರು. ಉತ್ತಮ ಕೃಷಿಕರಾಗಿದ್ದ ಇವರನ್ನು ಚಿಕ್ಕನಕೋಡಿನ ಗ್ರಾಮೀಣ ವ್ಯವಸಾಯ ಸಂಘ ಸನ್ಮಾನಿಸಿತ್ತು.

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version