Follow Us On

WhatsApp Group
Important
Trending

ಸಹಾಯದ ನೆಪಮಾಡಿಕೊಂಡು ಮೋಸ: ಈತನ ಗುರುತು ಸಿಕ್ಕರೆ ಪೊಲೀಸರಿಗೆ ತಿಳಿಸಿ

ಅಮಾಯಕತನವೇ ಇವರಿಗೆ ಬಂಡವಾಳ
ಎಟಿಎಮ್ ತೆಗೆದುಕೊಂಡು ಮೋಸ
ಕಾರ್ಡ್ ಬದಲಾಯಿಸಿ ಪಂಗನಾಮ
ಅಪರಿಚತರಿಗೆ ಎಟಿಎಮ್ ಕಾರ್ಡ್ ಕೊಡಬೇಡಿ

ಕುಮಟಾ: ಅಂಗಡಿ ಕಳ್ಳತನ, ಮನೆಗಳ್ಳತನ ಮುಂತಾದ ಪ್ರಕರಣಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಲೆ ಇದ್ದು, ಎ.ಟಿ.ಎಮ್ ಮಷಿನ್‌ನಲ್ಲಿ ಹಣ ತೆಗೆಯುತ್ತಿರುವಾಗ ಸಹಾಯದ ನೆಪವೊಡ್ಡಿ ವ್ಯಕ್ತಿಯೋರ್ವನು ಹಣವನ್ನು ಲಪಟಾಯಿಸಿದ ಘಟನೆ ಕುಮಟಾ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹೌದು, ಎ.ಟಿ.ಎಮ್ ಮಷಿನ್‌ನಲ್ಲಿ ಕಾರ್ಡ್ ಹಾಕಿ ಹಣ ತೆಗೆಯುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವನು ಸಹಾಯ ಮಾಡುವ ನೆಪವೊಡ್ಡಿ ಎ.ಟಿ.ಎಮ್ ಕಾರ್ಡ್ ಅನ್ನು ತೆಗೆದುಕೊಂಡು , ಎ.ಟಿ.ಎಮ್ ಯಂತ್ರದಲ್ಲಿ ಬೆರೊಂದು ಕಾರ್ಡ್ ಇಟ್ಟು ಅಲ್ಲಿಂದ ಪರಾರಿಯಾದ ಘಟನೆ ನಡೆದಿದೆ.

ಕುಮಟಾದ ಕೋರ್ಟ್ನಲ್ಲಿ ಬೀಲಿಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಬೋರಕರ್ ಅವರು ಕುಮಟಾ ಪಟ್ಟಣದ ಹೊಸ್ ಬಸ್ ನಿಲ್ದಾಣದ ಸಮೀಪದ ಎಸ್.ಬಿ.ಐ ಎ.ಟಿ.ಎಮ್ ಕೌಂಟರ್‌ಗೆ ಹಣ ಡ್ರಾ ಮಾಡಲು ಹೋದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಎ.ಟಿ.ಎಮ್ ಮಷಿನ್‌ನಲ್ಲಿ ಕಾರ್ಡ್ ಹಾಕಿ ಹಣ ತೆಗೆಯುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವನು ಮಂಜುನಾಥ ಬೋರಕರ್ ಅವರಿಗೆ ಸಹಾಯ ಮಾಡುವ ನೆಪವೊಡ್ಡಿ ಎ.ಟಿ.ಎಮ್ ಕಾರ್ಡ್ ಅನ್ನು ತೆಗೆದುಕೊಂಡು ಮಂಜುನಾಥ ಬೋರಕರ್ ಅವರಿಗೆ ತಿಳಿಯದಂತೆ ಎ.ಟಿ.ಎಮ್ ಯಂತ್ರದಲ್ಲಿ ಬೇರೊಂದು ಕಾರ್ಡ್ ಇಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

ಈ ವೇಳೆ ದುಷ್ಕರ್ಮಿ, ಎ.ಟಿ.ಎಮ್ ಕಾರ್ಡ್ ಬಳಸಿಕೊಂಡು 70,905 ರೂ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಈ ಸಂಬoಧ ಮಂಜುನಾಥ ಬೋರಕರ್ ಅವರು ಕುಮಟಾ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತನ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ. ಈ ಅಪರಿಚಿತ ವ್ಯಕ್ತಿಯನ್ನು ಕಂಡಲ್ಲಿ ಕುಮಟಾ ಪೊಲೀಸ್ ಠಾಣೆಗೆ ಅಥವಾ ಹತ್ತಿರದ ಠಾಣೆಗೆ ಮಾಹಿತಿ ನೀಡುವಂತೆ ಕುಮಟಾ ಪಿ.ಎಸ್.ಐ ಆನಂದ ಮೂರ್ತಿಯವರು ತಿಳಿಸಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕುಮಟಾ

Back to top button