Important
Trending

ಅಸಲಿ ಚಿನ್ನ ನಕಲಿಯಾಗುತ್ತೆ? ಚಿನ್ನ ಗಿರವಿ ಇಟ್ಟವರು ಇದನ್ನು ಒಮ್ಮೆ ಓದಿ: ದಾಖಲಾಗಿದೆ ದೂರು

ಕುಮಟಾ: ಖಾಸಗಿ ಫೈನಾನ್ಸ್ ನಲ್ಲಿ ಚಿನ್ನವನ್ನು ಗಿರವಿ ಇಟ್ಟು ಸಾಲ ಪಡೆದುಕೊಳ್ಳುವವರು ನೋಡಲೇ ಬೇಕಾದ ಸುದ್ದಿಯಿದು. ಹೌದು, ತುಂಬಾ ಹಣಕಾಸಿನ ಸಮಸ್ಯೆ ಎದುರಾದಾಗ ಚಿನ್ನವನ್ನು ತಾತ್ಕಾಲಿಕವಾಗಿ ಗಿರವಿ ಇಟ್ಟು, ಹಣವನ್ನು ಸಾಲಪಡೆದುಕೊಳ್ಳುವುದನ್ನು ಕಾಣುತ್ತಿದ್ದೇವೆ. ಆದರೆ, ಈ ವೇಳೆ ನಿಮ್ಮ ಅಸಲಿ ಚಿನ್ನ ನಕಲಿಯಾಗಬಹುದು. ಹೇಗೆ ಅಂತೀರಾ? ಇಲ್ಲಿ ನಡೆದ ಈ ಘಟನೆಯನ್ನು ಒಮ್ಮೆ ನೋಡಿ. ಖಾಸಗಿ ಫೈನಾನ್ಸ್ ಕಂಪೆನಿಯಲ್ಲಿ ಗಿರವಿ ಇಟ್ಟ ಲಕ್ಷಾಂತರ ಮೌಲ್ಯದ ಚಿನ್ನ ಬದಲಿಸಿ, ನಕಲಿ ಚಿನ್ನ ಇಡಲಾಗಿದೆ ಎಂಬ ಆರೋಪ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಕೇಳಿಬಂದಿದೆ.

ಕುಮಟಾ ಖಾಸಗಿ ಫೈನಾನ್ಸ್ ನ ಅಧಿಕಾರಿಯೊಬ್ಬನ ವಿರುದ್ಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಖಾ ಪ್ರಬಂಧನ ವಿರುದ್ಧ ದೂರು ಎಚ್ ಆರ್ ಮ್ಯಾನೇಜರ್ ದೂರು ನೀಡಿದ್ದು, ದೂರಿನಲ್ಲಿ ಉಲ್ಲೇಖಿಸಿದ ಅಂಶಗಳು ಗಿರವಿ ಇಟ್ಟವರ ಆತಂಕಕ್ಕೆ ಕಾರಣವಾಗಿದೆ. ಗಿರವಿ ಇಟ್ಟಿದ್ದ ಸುಮಾರು 7 ಲಕ್ಷ ಮೌಲ್ಯದ ಚಿನ್ನ ಸದ್ದಿಲ್ಲದೇ ಮಾಯವಾಗಿದೆ.

ಚಿನ್ನವನ್ನು ಇಟ್ಟಿದ್ದ ಪ್ಯಾಕೇಜ್ ಕತ್ತರಿಸಿ, ಆ ಜಾಗದಲ್ಲಿ ನಕಲಿ ಚಿನ್ನವಿಟ್ಟು ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2018ರ ಫೆಬ್ರವರಿ 7 ರಿಂದ 2020 ಸೆಪ್ಟೆಂಬರ್ 10ರ ಲ್ಲಿ ಕೆಲಸ ಮಾಡುತ್ತಿದ್ದ ಶಾಖಾ ಪ್ರಬಂಧಕ ಈ ಕೆಲಸ ಮಾಡಿದ್ದು, ಪೈನಾನ್ಸೆಗ್ ಹಾಗು ಗ್ರಾಹಕರಿಗೆ ಮೋಸ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button