ಲಾಡ್ಜ್ ಒಂದರ ಎದುರು ನಿಲ್ಲಿಸಿದ್ದ ಪ್ರವಾಸಿಗರೊಬ್ಬರ ದುಬಾರಿ ಬೈಕ್ ಕಳ್ಳತನ ಪ್ರಕರಣ: ಆರೋಪಿಯನ್ನು ಬಂಧಿಸಿದ ಕುಮಟಾ ಪೊಲೀಸರು

ಕುಮಟಾ : ಕುಮಟಾ ತಾಲೂಕಿನ ಲಾಡ್ಜ್ ಒಂದರ ಎದುರು ನಿಲ್ಲಿಸಿದ್ದ ಪ್ರವಾಸಿಗರೊಬ್ಬರ ದುಬಾರಿ ಬೈಕ್ ಬೆಳಗಾಗುವುದರೊಳಗೆ ಮಾಯವಾಗಿತ್ತು.ಇದೀಗ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡಿದ ಆರೋಪಿಯನ್ನು ಕಾರವಾರ ಶಿರವಾಡದ ಆನಂದ (19 ವರ್ಷ) ಎಂದು ತಿಳಿದುಬಂದಿದೆ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.
ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳವನ್ನೆಲ್ಲಾ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ ಕುಮಟಾಕ್ಕೆ ಆಗಮಿಸಿ, ಇಲ್ಲಿನ ಲಾಡ್ಜ್ ನಲ್ಲಿ ತಂಗಿದ್ದರು. ಆದರೆ ರಾತ್ರಿರೋತ್ರಿ ತಾಲೂಕಿನ ಲಾಡ್ಜ್ ನಿಲ್ಲಿಸಿದ್ದ ಈ ದುಬಾರಿ ಬೈಕ್ ಕಳ್ಳತನವಾಗಿತ್ತು.
ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ರವರುಗಳಾದ
ಆನಂದಮೂರ್ತಿ, ರವಿ ಗುಡ್ಡಿ, ಚಂದ್ರಮತಿ ಪಟಗಾರ ಹಾಗೂ ಸಿಬ್ಬಂದಿಯವರಾದ ಸಿಹೆಚ್ಸಿ-
ದಯಾನಂದ ನಾಯ್ಕ, ಸಿಹೆಚ್ಸಿ ಗಣೇಶ ನಾಯ್ಕ, ಸಿಪಿಸಿ- ಸಂತೋಷ ಬಾಳೇರ, ಸಿಪಿಸಿ- ಕೃಷ್ಣ ಎನ್, ಜೆ, ಸಿಪಿಸಿ- ಬಸವರಾಜ ಜಾಡರ, ಮಾರುತಿ ಗಾಳಪೂಜಿ, ಇವರುಗಳ ತಂಡ ಪ್ರಮುಖ ಪಾತ್ರ ವಹಿಸಿದೆ.
ವಿಸ್ಮಯ ನ್ಯೂಸ್ ಕುಮಟಾ
ಇದನ್ನೂ ಓದಿ : ಪ್ರಮುಖ ಸುದ್ದಿಗಳು
- ಕಳ್ಳಾಟದಲ್ಲೇ ಸಂತೋಷವಾಗಿರುವ ಪೊಲೀಸ್ ? ಅಕ್ರಮ ಗೋವಾ ಸರಾಯಿ ಸಾಗಾಟ ಪ್ರಕರಣ: ಕಾರು ಸಮೇತ ಆರೋಪಿಗಳು ವಶಕ್ಕೆ
- ಶಿಕ್ಷಕ-ಶಿಕ್ಷಕಿಯರು ಬೇಕಾಗಿದ್ದಾರೆ: ಇಂದೇ ಅರ್ಜಿ ಸಲ್ಲಿಸಿ
- ಎ.ಎಸ್ ಐ ಮನೆಯಲ್ಲಿ ಕಳ್ಳತನ: ಚಿನ್ನಾಭರಣ ,ಬೆಳ್ಳಿ ವಸ್ತು ಹಾಗೂ ನಗದು ಸೇರಿ ಲಕ್ಷಂತರ ಮೌಲ್ಯದ ನಗ-ನಾಣ್ಯ ಕದ್ದ ಕಳ್ಳನಾರು ?
- ತರಂಗ ಫರ್ನಿಚರ್ ಫೆಸ್ಟಿವಲ್ ವಿಸ್ತರಣೆ: ಗೃಹಪ್ರವೇಶದ ಗ್ರಾಹಕರಿಗೆ ವಿಶೇಷ ಕೊಡುಗೆ
- ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬರುತ್ತಲೇ ಎಚ್ಚೆತ್ತುಕೊಂಡ ವ್ಯವಸ್ಥೆ : ತಹಶೀಲ್ದಾರ್ ಕಾರ್ಯಾಲಯದಲ್ಲಿ ಮತ್ತೆ ಆರಂಭವಾದ ಆಧಾರ್ ಕಾರ್ಡ್ ನವೀಕರಣ ಮತ್ತು ತಿದ್ದುಪಡಿ ವ್ಯವಸ್ಥೆ