Follow Us On

WhatsApp Group
Big News
Trending

ಅತಿಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಕೊಡುತ್ತೇವೆ ಎಂದು ನಂಬಿಸಿ ಗ್ರಾಹಕರಿಗೆ ಮೋಸ: ನೂರಾರು ಜನರಿಗೆ ವಂಚನೆ: ಅಂಗಡಿ ಹಾಕಿದ್ದವನು ನಾಪತ್ತೆ: ಫೋನ್ ಸ್ವಿಚ್ ಆಫ್

ನೂರಕ್ಕೂ ಅಧಿಕ ಜನರು ಶೇಕಡಾ 45 ರಷ್ಟು ರಿಯಾಯತಿ ದರದಲ್ಲಿ ವಸ್ತು ಸಿಗುತ್ತದೆ ಎಂದು ಮುಂಗಡವಾಗಿ ಹಣ ಪಾವತಿಸಿದ್ದರು. ಆದರೆ, ಈಗ ದಿಢೀರ್ ಆಗಿ ಮಳಿಗೆಯನ್ನು ಬಂದ್ ಮಾಡಲಾಗಿದೆ. ಮಾಲೀಕರಿಗೆ ಫೋನ್ ಮಾಡಿದ್ರೆ ಸ್ವಿಚ್ ಆಫ್ ಆಗಿದೆ.

ಕಾರವಾರ: ನಗರದಲ್ಲಿ ತಾತ್ಕಾಲಿಕವಾಗಿ ಅಂಗಡಿ ಹಾಕಿದ ಮಾಲೀಕರೊಬ್ಬರು ಅತಿ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಕೊಡುತ್ತೇವೆ ಎಂದು ನಂಬಿಸಿ ಗ್ರಾಹಕರಿಗೆ ಮೋಸ ಮಾಡಿದ ಘಟನೆ ನಡೆದಿದೆ. ಮುಂಗಡ ಹಣ ಕೊಟ್ಟ ಗ್ರಾಹಕರು ಈಗ ಹಣವೂ ಇಲ್ಲದೆ, ಗೃಹೋಪಯೋಗಿ ವಸ್ತುವು ಇಲ್ಲದೆ ಪರಿತಪಿಸುವಂತಾಗಿದೆ. ಅಮೋಘ ಟ್ರೇಡರ್ಸ್ ಎನ್ನುವ ತಮಿಳುನಾಡು ಮೂಲದ ಅಂಗಡಿಯೊಂದು ಕಳೆದ ಒಂದು ತಿಂಗಳ ಹಿಂದೆ ಕಾಜುಭಾಗದಲ್ಲಿ ಮಹಿಳೆ ಆರಂಭಿಸಿತ್ತು. ಸ್ಥಳದಲ್ಲಿಯೇ ಹಣಕಟ್ಟಿದರೆ ಶೇಕಡಾ 10 ರಷ್ಟು ರಿಯಾಯಿತಿ ಹಾಗು ಹತ್ತು ದಿನದ ಮುಂಚಿತವಾಗಿ ಹಣ ಪಾವತಿಸಿದರೆ ಶೇಕಡ 45 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಎಲ್ಲ ಕಡೆ ಪ್ರಚಾರ ಮಾಡಿದ್ದರು.

ಅಂಗಡಿ ಮಾಲೀಕರ ಪ್ರಚಾರ ನಂಬಿದ ಗ್ರಾಹಕರು, ಅತಿ ಕಡಿಮೆ ದರಕ್ಕೆ ಗೃಹೋಪಯೋಗಿ ವಸ್ತುಗಳು ಸಿಗುತ್ತದೆ ಎಂದು ಖರೀದಿಸಲು ಮುಗಿಬಿದ್ದಿದ್ದಾರೆ. ಆರಂಭದಲ್ಲಿ ಬಂದ ಗ್ರಾಹಕರಿಗೆ ಅತಿ ಕಡಿಮೆದರದಲ್ಲಿ ವಸ್ತುಗಳನ್ನು ನೀಡಿ, ನಂಬಿಕೆ ಗಳಿಸಿ, ಮತ್ತಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಮತ್ತಷ್ಟು ಗ್ರಾಹಕರು ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ನೂರಕ್ಕೂ ಅಧಿಕ ಜನರು ಶೇಕಡಾ 45 ರಷ್ಟು ರಿಯಾಯತಿ ದರದಲ್ಲಿ ವಸ್ತು ಸಿಗುತ್ತದೆ ಎಂದು ಮುಂಗಡವಾಗಿ ಹಣ ಪಾವತಿಸಿದ್ದರು. ಆದರೆ, ಈಗ ದಿಢೀರ್ ಆಗಿ ಮಳಿಗೆಯನ್ನು ಬಂದ್ ಮಾಡಲಾಗಿದೆ. ಮಾಲೀಕರಿಗೆ ಫೋನ್ ಮಾಡಿದ್ರೆ ಸ್ವಿಚ್ ಆಫ್ ಆಗಿದೆ. ಇದರಿಂದ ಅಂಗಡಿಗೆ ಬಂದ ಗ್ರಾಹಕರು ಆತಂಕಗೊಂಡಿದ್ದರು.

ಅಂಗಡಿ ಮುಂದೆ ನೂರಾರು ಜನರು ಸೇರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಂಗಡಿ ಮಾಲೀಕರ ಹುಡುಕಾಟಕ್ಕೆ ಪ್ರಯತ್ನ ನಡೆಸಿದ್ದಾರೆ. ಅಂಗಡಿ ಮಾಲೀಕ ತಂಗಿದ್ದ ಎನ್ನಲಾದ ಮನೆಗೆ ತೆರಳಿದಾಗ ಆತ ಅಲ್ಲಿಂದಲೂ ಪರಾರಿಯಾಗಿದ್ದ. ಈಗ ಅಂಗಡಿಗೆ ನಗರಸಭೆಯಿಂದ ಅನುಮತಿ ಕೂಡಾ ಪಡೆದುಕೊಂಡಿಲ್ಲ. ಆಧಾರ್ ಕಾರ್ಡ್ ಕೊಟ್ಟು ಜಿಎಸ್‌ಟಿ ಮಾಡಿಸಿದ್ದು, ಇದನ್ನು ಆಧರಿಸಿ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಚ್ಚೆತ್ತುಕೊಳ್ಳಬೇಕಿದೆ ಜನರು: ಇತ್ತಿಚಿನ ದಿನಗಳಲ್ಲಿ ಎಲ್ಲ ಕಡೆ ವಂಚನೆ ಪ್ರಕರಣ ಹೆಚ್ಚುತ್ತಿದೆ. ಜನರ ಅಮಾಯಕ ತನ ಬಂಡವಾಳ ಮಾಡಿಕೊಳ್ಳುವವರು ಮತ್ತು ಹೆಚ್ಚಿನ ಹಣದ ಆಸೆ ತೋರಿಸಿ ಮೋಸ ಮಾಡುವ ಕೃತ್ಯ ಸಾಮಾನ್ಯವಾಗಿದೆ. ಹೀಗಾಗಿ ಜನರು, ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ. ಮೊದಲಿನಿಂದಲೂ ಇರುವ ಪರಿಚಯಸ್ಥ ಮಳಿಗೆಗೆ ತೆರಳಿ ವಸ್ತುಗಳನ್ನು ಖರೀದಿಸುವುದು ಒಳಿತು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಕಾರವಾರ

Back to top button