Follow Us On

WhatsApp Group
Focus News
Trending

ರಾಜ್ಯ ಪ್ರಸಿದ್ಧ ಬನವಾಸಿಯ ಕದಂಬೋತ್ಸವ ಆಚರಣೆ ಸದ್ಯಕ್ಕಿಲ್ಲ: ಶಿವರಾಮ್ ಹೆಬ್ಬಾರ್

ಶಿರಸಿ: ರಾಜ್ಯ ಪ್ರಸಿದ್ಧ ಬನವಾಸಿಯ ಕದಂಬೋತ್ಸವ ಆಚರಣೆ ಸದ್ಯಕ್ಕಿಲ್ಲ. ಇನ್ನೇನು ಎರಡು ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಆದ್ದರಿಂದ ಕದಂಬೋತ್ಸವವನ್ನು ಮಳೆಗಾಲದ ನಂತರ ಆಚರಿಸಲು ಚಿಂತನೆ ನಡೆಸುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಕದಂಬೋತ್ಸಕ್ಕೆ ಸಾಕಷ್ಟು ಪೂರ್ವ ತಯಾರಿಗಳು ನಡೆಸಬೇಕಾಗುತ್ತದೆ. ಕೋವಿಡ್ ಕಾರಣಗಳಿಂದ ಕದಂಬೋತ್ಸವ ಆಚರಣೆ ನಡೆದಿಲ್ಲ. ಮಳೆಗಾಲದ ನಂತರ ಕದಂಬೋತ್ಸವ ಆಚರಣೆ ಮಾಡಲಾಗುವುದು ಎಂದರು.

ವಿಸ್ಮಯ ನ್ಯೂಸ್, ಶಿರಸಿ

Back to top button