Follow Us On

WhatsApp Group
Focus NewsImportant
Trending

ಬಸ್ಸಿನಿಂದ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವ ಕುಸಿದು ಬಿದ್ದು ಸಾವು

ಅಂಕೋಲಾ: ಬಸ್ ನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವ , ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಪಟ್ಟಣದ ದಿನಕರ ದೇಸಾಯಿ ರಸ್ತೆಯಲ್ಲಿ  ಎಲ್ ಆಯ್ ಸಿ ಆಫೀಸ್ ಎದುರು ಹೋಟೇಲ್ ಒಂದರ ಪಕ್ಕ   ಸಂಭವಿಸಿದೆ. ಗೋಕರ್ಣ ಕಾರ್ ಸ್ಟ್ರೀಟ್ ಬಳಿಯ ನಿವಾಸಿ ಮಹಾಬಲೇಶ್ವರ ಜಿ ನಂಬಿಯಾರ (61)  ಮೃತ ದುರ್ದೈವಿ.

ಈತನು ತನ್ನ ಅನಾರೋಗ್ಯ ಸಮಸ್ಯೆಯಂದ ಅಂಕೋಲಾದ ಖಾಸಗಿ ಆಸ್ಪತ್ರೆಗೆ  ಆಗಾಗ ಬಂದು ಡಯಾಲಿಸಿಸ್ ಮತ್ತಿತರ ಚಿಕಿತ್ಸೆಗೆ ಒಳಪಡುತ್ತಿದ್ದ ಎನ್ನಲಾಗಿದೆ.,ಅದೇ ರೀತಿ ಈ ದಿನ ಸಹ ಗೋಕರ್ಣದಿಂದ  ಬಸ್ ನಲ್ಲಿ ಅಂಕೋಲಾಕ್ಕೆ  ಬಂದಿಳಿದು,ಆಸ್ಪತ್ರೆಯತ್ತ  ನಡೆದುಕೊಂಡು ಹೋಗುತ್ತಿರುವಾಗ ನೂರಿನ್ನೂರು ಮೀಟರ್ ಅಂತರದಲ್ಲಿ ದಾರಿ ಮಧ್ಯೆ ಕುಸಿದು ಬಿದ್ದು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ  ಎನ್ನಲಾಗಿದೆ.

ಸಾರ್ವಜನಿಕರಿಂದ ಅಂಕೋಲಾ  ಪೋಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ  ಎಚ್ ಸಿ, ದಿವಾಕರ್ ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದರು.ಮೃತದೇಹವನ್ನು ತಾಲೂಕ ಆಸ್ಪತ್ರೆ ಶವಾಗಾರಕ್ಕೆ  ಸಾಗಿಸಲು ಕನಸಿಗದ್ದೆಯ ವಿಜಯ ಕುಮಾರ್ ನಾಯ್ಕ,ಪುರಸಭೆ ಸಿಬ್ಬಂದಿ ಅರುಣ್ ನಾಯ್ಕ,ಸಾಮಾಜಿಕ ಕಾರ್ಯಕರ್ತ ಬೊಮ್ಮ ಗೌಡ ಮತ್ತಿತರರು ಸಹಕರಿಸಿದರು. ಘಟನೆ ಕುರಿತಂತೆ ಮೃತನ ಕುಟುಂಬಸ್ಥರಿಗೆ ಸುದ್ದಿ ತಲುಪಿಸಲಾಗಿದ್ದು, ಹೆಚ್ಚಿನ  ಮಾಹಿತಿಗಳು ತಿಳಿದು ಬರಬೇಕಾಗಿದೆ.                   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button