Follow Us On

WhatsApp Group
Important
Trending

ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ KSRTC ಬಸ್: 11 ಮಂದಿಗೆ ಗಾಯ

ಶಿರಸಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಪಕ್ಕದ ಗದ್ದೆಗೆ ಬಿದ್ದು ಚಾಲಕ ಸೇರಿ 11 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬಸ್ಸು ಶಿರಸಿ ಕುಮಟಾ ಹೆದ್ದಾರಿಯಲ್ಲಿ ಕುಮಟಾ ಕಡೆಯಿಂದ ಸಿರ್ಸಿ ಕಡೆಗೆ ಹೋಗುತ್ತಿರುವಾಗ ಸಿರ್ಸಿ ತಾಲೂಕಿನ ಹನುಮಂತಿ ಸಮೀಪದ ಹಾರುಗಾರ್ ಬಳಿ ಘಟನೆ ಸಂಭವಿಸಿದೆ.

ಚಾಲಕ ಸೇರಿ ಬಸ್ಸಿನಲ್ಲಿದ್ದ 11 ಪ್ರಯಾಣಿಕರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Back to top button