Join Our

WhatsApp Group
Big News
Trending

ಭಟ್ಕಳದ ಮುಂಡಳ್ಳಿಯಲ್ಲಿ MGM ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಶುಭಾರಂಭ

ಭಟ್ಕಳ: ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾದ ಎಮ್.ಜಿ.ಎಮ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆಯು ಸೋಮವಾರದಂದು ಮುಂಡಳ್ಳಿಯಲ್ಲಿ ಉದ್ಘಾಟನೆಗೊಂಡಿತು. ಅರ್ಬನ್ ಬ್ಯಾಂಕ್ ನ ಮಾಜಿ ನಿರ್ದೇಶಕ ಎಂ ಆರ್ ನಾಯ್ಕ ನೂತನವಾಗಿ ನಿರ್ಮಾಣವಾದ ಸಂಘದ 6 ನೇ ಶಾಖೆಯನ್ನು ಉದ್ಘಾಟಿಸಿ, ಠೇವಣಿ ಇಟ್ಟು ಶುಭ ಹಾರೈಸಿದರು.

ಮುಂಡಳ್ಳಿಯ ಸತ್ಯನಾರಾಯಣ ದೇವಸ್ಥಾನದ ಸಮೀಪ ಪ್ರಾರಂಭವಾದ ನೂತನ ಶಾಖೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ ಶಾಖೆಯಾಗಿದ್ದು. ಮಹಿಳಾ ಸಬಲಿಕರಣದ ದೃಷ್ಟಿಯಿಂದ ಸಹಕಾರಿ ಸಂಘದ ಸಂಸ್ಥಾಪಕ ಈರಪ್ಪ ನಾಯ್ಕ ಗರ್ಡಿಕರ್ ಇಡುತ್ತಿರುವ ಹೆಜ್ಜೆ ಶ್ಲಾಘನೀಯವೆನಿಸುತ್ತದೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಈರಪ್ಪ ನಾಯ್ಕ ಗರ್ಡಿಕರ್, ಭಟ್ಕಳ ನಾಮಧಾರಿ ಸಂಘದ ಉಪಾಧ್ಯಕ್ಷ ಎಂ ಕೆ ನಾಯ್ಕ, ಬೆಳ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ ನಾಯ್ಕ, ಶ್ರೀನಿವಾಸ ನಾಯ್ಕ ಮತ್ತಿತರರು ಹಾಜರಿದ್ದರು.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ

Back to top button