
ಮುರ್ಡೇಶ್ವರ: ಪ್ರವಾಸಿಗರಿಗೆ ಮುರುಡೇಶ್ವರ ಬೀಚ್ ಗೆ ಇಳಿಯದಂತೆ ಮೂರು ತಿಂಗಳು ಸಂಪೂರ್ಣ ನಿಷೇಧ ಹೇರಲಾಗಿದೆ. ಜಿಲ್ಲಾಡಳಿತ ,ಪ್ರವಾಸೋದ್ಯಮ ಇಲಾಖೆ ತಾಲೂಕಾಡಳಿತ ಭಟ್ಕಳ, ಹಾಗೂ ಗ್ರಾಮಪಂಚಾಯತ ಮಾವಳ್ಳಿ ಸಹಯೋಗದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೂನ್ ತಿಂಗಳಿoದ ಮುಂದಿನ ಸಪ್ಟೆಂಬರ್ ತಿಂಗಳವರೆಗೆ ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರವಾಗಿರುವುದರಿಂದ ಇಂತಹ ಸಂದರ್ಭಗಳಲ್ಲಿ ಸಮುದ್ರದ ಅಲೆಗಳು ಜೀವಕ್ಕೆ ಅಪಾಯಕರವಾಗಿರವುದರಿಂದ ಪ್ರವಾಸಿಗರು ಸಮುದ್ರದಲ್ಲಿ ಇಳಿಯುವುದು ಈಜಾಡುವುದು, ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆದ್ದರಿಂದ ಮುರುಡೇಶ್ವರ ಪೋಲಿಸ್ ಠಾಣೆ ಮುನ್ನೇಚ್ಚರಿಕಾ ಕ್ರಮಕ್ಕಾಗಿ ಬೀಚ್ ಗಳಿಗೆ ತೇರಳುವ ಮಾರ್ಗಗಳಿಗೆ ಸೂಚನಾ ಫಲಕದ ಬ್ಯಾನರ್ ಅಳವಡಿಸಿದ್ದು, ನೀಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ಸಿಪಿಐ ಸಂತೋಷ್ ಕೈಕಿಣಿ, ಮುರುಡೇಶ್ವರ ಠಾಣಾ ಪಿಎಸ್ಐ ಹಣಮಂತ ಬೀರಾದಾರ ಸಿಬ್ಬಂದಿಗಳು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ