Follow Us On

WhatsApp Group
Big News
Trending

ಅಧಿಕಾರಿಗಳ ಎಡವಟ್ಟು: 70ಕ್ಕೂ ಕಡಲಾಮೆ ಮರಿಗಳ ಸಾವು

ಹೊನ್ನಾವರ: ಅರಣ್ಯ ಇಲಾಖೆಯವರು ಕಡಲಾಮೆ ಮೊಟ್ಟೆ ಪತ್ತೆಯಾದ ಬಳಿಕ ಅವುಗಳನ್ನು ಸಂರಕ್ಷಣೆ ಮಾಡಲು ಪಂಜರ ನಿರ್ಮಿಸಿ, ಅದರಲ್ಲಿ ಕಡಲಾಮೆ ಮರಿಗಳನ್ನು ಇಟ್ಟಿದ್ದರು. ಆದರೆ, ಮೊಟ್ಟೆಯಿಂದ ಮರಿಯಾದ ಬಳಿಕ ಪಂಜರದಲ್ಲಿ ಇಟ್ಟಿದ್ದ ಕಡಲಾಮೆಗಳನ್ನು ಸಮುದ್ರಕ್ಕೆ ಬಿಡಲು ಅರಣ್ಯ ಇಲಾಖೆಯವರು ಮರೆತಿದ್ದಾರೆ.

ಹೀಗಾಗಿ ಸಮುದ್ರಕ್ಕೆ ಕಡಲಾಮೆ ಬಿಡಲು ಸರಿಯಾದ ಸಮಯಕ್ಕೆ ಬಾರದ ಹಿನ್ನಲೆಯಲ್ಲಿ ಹಲವು ಕಡಲಾಮೆ ಮರಿಗಳು ಪಂಜರದಲ್ಲೇ ಸಾವಪ್ಪಿದ ಘಟನೆ ಕರ್ಕಿ ಪಾವಿನಕುರ್ವಾ ಬಳಿ ಸಂಭವಿಸಿದೆ. ಇದರಿಂದಾಗಿ 60 ರಿಂದ 70ಕ್ಕೂ ಹೆಚ್ಚು ಕಡಲಾಮೆ ಮರಿಗಳು ಸಾವನ್ನಪ್ಪಿವೆ ಎನ್ನಲಾಗಿದೆ.

ಮೊಟ್ಟೆ ಇಟ್ಟ ಸ್ಥಳವನ್ನ ಗುರುತಿಸಿ ಅದಕ್ಕೆ ಪಂಜರ ನಿರ್ಮಿಸಿ ಅರಣ್ಯ ಇಲಾಖೆಯವರು ಸುಮ್ಮನಾಗಿದ್ದಾರೆ. ಪಂಜರ ನಿರ್ಮಿಸಿ, ಅದರಲ್ಲಿ ಕಡಲಾಮೆಯ ಮೊಟ್ಟೆಗಳನ್ನು ಬಿಟ್ಟು ಹಲವು ದಿನ ಕಳೆದರು ಅರಣ್ಯ ಇಲಾಖೆಯವರು ಇತ್ತ ಕಡೆ ಸುಳಿಯಲಿಲ್ಲ.

ಹೀಗಾಗಿ ಪಂಜರದಿoದ ಹೊರಬರಲಾಗದೆ ಹಲವು ಕಡಲಾಮೆ ಮರಿಗಳು ಸಾವನ್ನಪ್ಪಿವೆ. ಬದುಕಿದ್ದ 4 ರಿಂದ 5 ಮರಿಗಳ ಸ್ಥಳೀಯರು ರಕ್ಷಣೆ ಮಾಡಿ, ಸಮುದ್ರಕ್ಕೆ ಬಿಟ್ಟಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಹೊನ್ನಾವರ

Back to top button