Follow Us On

Google News
Big News
Trending

ಅಲ್ಲಿ ಹೋಗುತ್ತಲೇ ಕೈಯಲ್ಲಿದ್ದ 25 ಲಕ್ಷ ಹಣ ಬ್ಯಾಗ್ ಕಸಿದುಕೊಂಡು ಹೋದರು? ಗೋಡಂಬಿ ಮಾರಾಟದ ಅಸಲಿಯತ್ತೇನು?

ನಿಜವಾಗಿ ಅಲ್ಲಿ ನಡೆದಿದ್ದು ಏನು ನೋಡಿ?

ಮುಂಡಗೋಡ; ಗೋಡಂಬಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನನ್ನು ಕರೆದು ಆತನ ಬಳಿಯಿದ್ದ ಸುಮಾರು 25 ಲಕ್ಷ ಹಣದ ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ನಡೆದಿರೋದು ತಾಲೂಕಿನ ಮಳಗಿ ಪಂಚಾಯತಿ ವ್ಯಾಪ್ತಿಯ ಧರ್ಮಾ ಕಾಲೋನಿಯಲ್ಲಿ. ಆದರೆ, ಈ ಇದರ ಹಿಂದೆ ಹತ್ತು ಹಲವು ಅನುಮಾನುಗಳು ಮೂಡಿವೆ.

ಚಿಕ್ಕೋಡಿ ಮೂಲದ ಶಿವನಗೌಡ ಪಾಟೀಲ ತನ್ನ ಸ್ನೇಹಿತನ ಜತೆ ಬಂದಿದ್ದ. ಗೋಡಂಬಿ ಕೊಡುವ ಇಬ್ಬರು ಧರ್ಮಾ ಕಾಲೋನಿ ಸಮೀಪ ಕರೆದುಕೊಂಡು ಹೋಗುತ್ತಲೆ ಶಿವನಗೌಡ ಕೈಯಲ್ಲಿದ್ದ ಹಣದ ಬ್ಯಾಗ್ ಕಸಿದುಕೊಂಡು ಧರ್ಮಾ ಜಲಾಶಯದ ಕೆಳಗಡೆ ಇಬ್ಬರು ಓಡಿ ಹೋಗಿದ್ದಾರಂತೆ. ಇಬ್ಬರನ್ನು ಬೆನ್ನು ಹತ್ತಿದ ಶಿವನಗೌಡ ಪಾಟೀಲ ಹಾಗೂ ಸ್ನೇಹಿತ ಬೆನ್ನು ಹತ್ತಿದ್ದಾರೆ ಎನ್ನಲಾಗಿದೆ. ಆದರೂ ದೋಚಿಕೊಂಡುವರು ಸಿಗಲೇ ಇಲ್ಲ ಎಂದು ಹಣ ಕಳೆದುಕೊಂಡವರು ಹೇಳುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್ ಶ್ವಾನದಳವನ್ನು ಕರೆಯಿಸಲಾಗಿದೆ. ಚಿಕ್ಕೋಡಿಯವರು ಇಷ್ಟು ದೊಡ್ಡ ಮೊತ್ತದ ಹಣ ಏತಕ್ಕೆ ತಂದಿದ್ದರು? ಹಳೆ ಬಂಗಾರದನಾಣ್ಯಗಳು ಖರೀದಿಸಲು ಬಂದಿದ್ದರೆ ಅಥವಾ ಗೋಡಂಬಿ ಖರೀದಿಸಲು ಬಂದಿದ್ದರೆ ಅಥವಾ ಮತ್ತೇನ್ನನಾದರೂ ಖರೀದಿಸಲು ಬಂದಿದ್ದರೆ ಎಂಬ ಅನುಮಾನ ಕಾಡುತ್ತಿದೆ. ಗೋಡಂಬಿ ಬೀಜ ಖರೀದಿ ಮಾಡಲು ಒಂದ ವ್ಯಾಪಾರಸ್ಥರು ಊರೊಳಗೆ ಬಿಟ್ಟು ಡ್ಯಾಂಗೆ ಹೋಗಿದ್ದೇಕೆ? ಕೆಲವು ಮಾಹಿತಿಗಳ ಪ್ರಕಾರ ಹಳೆಯ ಬಂಗಾರ ಕೊಡಿಸುವುದಾಗಿ ನಂಬಿಸಿ ಅಪರಿಚಿತರು ಇವರನ್ನು ಕರೆದುಕೊಂಡು ಹೋಗಿದ್ದಾರೆ ಎಂಬ ಪ್ರಶ್ನೆ ಉದ್ಬವಿಸಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button