Follow Us On

WhatsApp Group
Important
Trending

ದೇವರಿಗೆ ಕೈಮುಗಿಯಲು ಹೋದವೇಳೆ ಬಾವಿಯಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿ ಸಾವು

ಯಲ್ಲಾಪುರ: ದೇವರಿಗೆ ಕೈಮುಗಿಯಲು ಹೋದವೇಳೆ ವ್ಯಕ್ತಿಯೊಬ್ಬ ಬಾವಿಯಲ್ಲಿ ಕಾಲುಜಾರಿ ಬಿದ್ದು ಮೃತರಾದ ಘಟನೆ ತಾಲೂಕಿನ ಉಚಗೇರಿ ಗ್ರಾಮದ ಬಿಬ್ನಳ್ಳಿಯಲ್ಲಿ ನಡೆದಿದೆ.

ಲಕ್ಷ್ಮೀನಾರಾಯಣ ರಾಮಚಂದ್ರ ಹೆಗಡೆ ( 52 ) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಗುರುತಿಸಲಾಗಿದೆ. ಇವರು ತಮ್ಮ ತೋಟದಲ್ಲಿರುವ ಚೌಡಿಮನೆಗೆ ಕೈಮುಗಿಯಲು ಹೋಗಿದ್ದು,‌ಎಷ್ಟು ಹೊತ್ತಾದರಯ ಮನೆಗೆ ಬಾರದೇ ಇರುವಾಗ ಮನೆಯವರು ಹುಡುಕಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದೆ.

ಕಾಲು ಜಾರಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button