Follow Us On

WhatsApp Group
Focus News
Trending

ಮರಳು ದಿಬ್ಬಕ್ಕೆ ಗುದ್ದಿ ಶರಾವತಿ ಅಳಿವೆಯಲ್ಲಿ ಬೋಟ್ ಮುಳುಗಡೆ: ಮೀನುಗಾರರ ರಕ್ಷಣೆ: 25 ಲಕ್ಷಕ್ಕೂ ಅಧಿಕ ಹಾನಿ

ಹೊನ್ನಾವರ :‌ ಮೀನುಗಾರಿಕೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಬೋಟ್ ವೊಂದು ಅಳಿವೆಯಲ್ಲಿನ ಮರಳು ದಿಬ್ಬಕ್ಕೆ ಗುದ್ದಿ ಅವಗಢ ಸಂಭವಿಸಿದೆ. ಬೋಟ್ ಮುಳಗಡೆಯಿಂದ ಬೋಟಿನಲ್ಲಿದ ಅಪಾರ ಪ್ರಮಾಣದ ಮೀನು ಹಾಗೂ ಬೋಟ್ ನಲ್ಲಿರುವ ಸಲಕರಣೆ ಸಮುದ್ರದ ಪಾಲಾಗಿದೆ.

ಈ ಘಟನೆಯಲ್ಲಿ 25 ಲಕ್ಷಕು ಹೆಚ್ಚು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೋಟಿನಲ್ಲಿದ್ದ ಮೀನುಗಾರರನ್ನು ಕರಾವಳಿ ಕಾವಲು ಪಡೆ ಹಾಗೂ ಬೇರೆ ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.

ಬೋಟ್ ಮುಳುಗುತ್ತಿರುವ ದೃಶ್ಯ

ತಾಲೂಕಿನ ಕಾಸರಕೋಡ ಬಂದರಿಗೆ ವಾಪಸಾಗುತ್ತಿದ್ದ ಗಂಗೊಳ್ಳಿಯ ಶಿವರಾಮ ಶ್ರೀಯಾನ್ ಮಾಲಕತ್ವದ ಶ್ರೀ ಕೃಷ್ಣ ಭಂಡಾರಿ ಬೋಟ್ ಮೀನುಗಾರಿಕೆಗೆ ತೆರಳಿ ಕಾಸರಕೋಡ ಬಂದರಿಗೆ ವಾಪಸ್ ಬರುತ್ತಿರುವಾಗ ಅಳಿವೆಯಲ್ಲಿನ
ಮರಳು ದಿಬ್ಬಕ್ಕೆ ಗುದ್ದಿದೆ. ಬೋಟ್ ಅಲೆಯ ರಭಸಕ್ಕೆ ಮುಳುಗಡೆಯಾಗಿದೆ ಎಂದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button