ಎರಡು ಮನೆಗಳ ದರೋಡೆ: ಅಂತರ್ ರಾಜ್ಯ ದರೋಡೆಕೋರರ ಬಂಧನ

ಯಲ್ಲಾಪುರ: ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ತಾಲೂಕಿನ ಹಿತ್ತಲ್ಲಿ ಪಂಚಾಯತ ವ್ಯಾಪ್ತಿಯ ಜಾಗರಮನೆ ಎಂಬಲ್ಲಿ ಎರಡು ಮನೆಗಳ ದರೋಡೆ ಪ್ರಕರಣಕ್ಕೆ ಸಂಬಧಿಸಿದoತೆ ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಹಿತ್ತಳ್ಳಿ ಪಂಚಾಯತ ಜಾಗರಮನೆ ಎಂಬಲ್ಲಿ ನಾಗರಾಜ ಗಣೇಶ್ ಹೆಗಡೆ ಮತ್ತು ಗೋಪಾಲ ದೇವೇಂದ್ರ ಹೆಗಡೆ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿ ಪರಾರಿಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಅದರಲ್ಲಿ ಮಧ್ಯಪ್ರದೇಶದ ನಿವಾಸಿ ಪ್ರತಾಪ್ ರತನ್ (28) ಎಂಬಾತನು ಜಾಮೀನಿನ ಮೇಲೆ ಹೊರಬಂದವನು ಪುನಃ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ ಮತ್ತು ಈ ದರೋಡೆ ಪ್ರಕರಣದ ತಲೆ ಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಠಾಕೂರ್ ಸಿಂಗ್ ರತನ್ ಸಿಂಗ್ ಮಿನಾವ ಮಧ್ಯಪ್ರದೇಶಕ್ಕೆ ತೆರಳಿ, ಅಲ್ಲಿನ ಪೊಲೀಸರ ನೆರವಿನೊಂದಿಗೆ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version