ಜಮೀನು ಹಕ್ಕಿನ ವಿಷಯದಲ್ಲಿ ಸಹೋದರರ ನಡುವೆ ಜಗಳ: ಮೂವರ ಮೇಲೆ ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲು
![](http://i0.wp.com/vismaya24x7.com/wp-content/uploads/2021/11/siddapura-police.jpg?fit=621%2C400&ssl=1)
ಸಿದ್ದಾಪುರ: 4 ಎಕರೆ ಅತಿಕ್ರಮಣ ಜಮೀನಿಗಾಗಿ ಸಹೋದರರ ನಡುವೆ ಜಗಳವಾಗಿ, ಹಲ್ಲೆ ನಡೆದ ಮತ್ತು ಜೀವ ಬೆದರಿಕೆ ಹಾಕಿರುವ ಪ್ರಕರಣ ಕೊಂಡ್ಲಿ ಗ್ರಾಮದಲ್ಲಿ ನಡೆದಿದೆ. ಸರ್ವೆ ನಂಬರ್ 308 “ಅ” ಇದರ ಬಗ್ಗೆ ಈಶ್ವರ ಲಕ್ಷ್ಮಣ ನಾಯ್ಕ ಕೊಂಡ್ಲಿ ರವರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈಶ್ವರ್ ಎನ್ನುವವರು ಬಳಕೆ ಮಾಡುತ್ತಿರುವ ಜಮೀನಿನಲ್ಲಿ ಆರೋಪಿತರು ಕೆಲವು ಗೂಂಡ ಗಳೊಂದಿಗೆ ಕತ್ತಿ ಕೊಡಲಿ ಬಡಿಗೆ ಮುಂತಾದ ಮಾರಕಾಸ್ತ್ರ ಗಳೊಂದಿಗೆ ಅಕ್ರಮ ವಾಗಿ ಪ್ರವೇಶಿಸಿ ಅ ಜಾಗದಲ್ಲಿ ಬೆಳೆದ ಬೆಲೆ ಬಾಳುವ 3-4 ವರ್ಷದ ಅಡಿಕೆ ತೆಂಗು ಮಾವು ಗಿಡಗಳನ್ನು ಕಿತ್ತು ಹಾಕಿದ್ದಾರೆ.
![](http://i0.wp.com/vismaya24x7.com/wp-content/uploads/2021/11/rooping-new.jpg?resize=708%2C275&ssl=1)
ಅಲ್ಲದೆ, ಕುಟುಂಬದವರಿಗೆ ಅವಾಚ್ಯ ಶಬ್ದದಿಂದ ಬೈದು ಈಶ್ವರ ಹಾಗೂ ಆತನ ಮಗನಾದ ಬಾಲಚಂದ್ರ ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಗೆ ಸಂಬoಧಿಸಿದoತೆ ಸೋಮಶೇಖರ ಲಕ್ಷ್ಮಣ ನಾಯ್ಕ, ವಾಸುದೇವ ಸೋಮಶೇಖರ ನಾಯ್ಕ ಹಾಗೂ ಕಾಳಿ ಪ್ರಸಾದ್ ಸೋಮಶೇಖರ ನಾಯ್ಕ ಕೊಂಡ್ಲಿ ರವರ ಮೇಲೆ ಸಿದ್ದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿರುತ್ತಾರೆ.
ವಿಸ್ಮಯ ನ್ಯೂಸ್, ಸಿದ್ದಾಪುರ
ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537
![](http://i0.wp.com/vismaya24x7.com/wp-content/uploads/2021/10/raghavendra-jyotisha-kendra-1.png?resize=708%2C398&ssl=1)