Follow Us On

WhatsApp Group
Important
Trending

ಪ್ರೀತಿಸು ಎಂದು ಕೈ ಹಿಡಿದು ಎಳೆದ‌ ಅನ್ಯಕೋಮಿನ ಯುವಕ: ಒಂದು ತಿಂಗಳ ನಂತರ ಯುವತಿ ದೂರು ದಾಖಲಿಸಿದ್ದೇಕೆ? ಗಲ್ಲಿಗಲ್ಲಿಯಲ್ಲಿ ಕೇಳಿಬರುತ್ತಿರುವ ಗುಸುಗುಸು ಏನು?

ಶಿರಸಿ: ಯುವಕ ತನ್ನನ್ನು ಪ್ರೀತಿಸುವಂತೆ ಕೈ ಹಿಡಿದು ಎಳೆದಿದ್ದಾನೆ ಎಂದು ಶಿರಸಿ ಠಾಣೆಯಲ್ಲಿ ಒಂದು ತಿಂಗಳ ನಂತರ ಯುವತಿ ದೂರು ನೀಡಿರುವುದು, ಹಲವು ವಿವಾದ, ಅನುಮಾನ‌ ಹುಟ್ಟುಹಾಕಿದೆ.

ನಗರದ ಜಾಫರ್ ಶೇಕ್ ಅಜಮಾಸ್ (20) ಎಂಬ ವಿದ್ಯಾರ್ಥಿ ನಗರದ ಎಂ.ಎಂ ಆರ್ಟ ಕಾಲೇಜಿನಲ್ಲಿ ದ್ವಿತೀಯ ಬಿ.ಎ ಓದುತಿದ್ದು, ಈತ ನಗರದ ಎಂ.ಇ.ಎಸ್ ಕಾಮರ್ಸ ಕಾಲೇಜಿನಲ್ಲಿ ಓದುತ್ತಿರುವ ಬ್ರಾಹ್ಮಣ ಯುವತಿಯೊಂದಿಗೆ ಸ್ನೇಹ ಬೆಳಸಿಕೊಂಡಿದ್ದ ಎನ್ನಲಾಗಿದೆ. ಆದರ ಈಗ ಇದೇ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಯುವಕನ ವಿರುದ್ಧ ದೂರು ದಾಖಲಾಗುತಿದ್ದಂತೆ ಕಾಲೇಜಿನಿಂದ ಆ ಯುವಕನನ್ನು ಆಡಳಿತ ಮಂಡಳಿ ಅಮಾನತ್ತು ಮಾಡಿದೆ. ಇತ್ತ, ಯುವತಿ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಯುವಕ ಪಾರಾರಿಯಾಗಿದ್ದಾನೆ.

ದೂರಿನಲ್ಲಿ ಏನಿದೆ? ಈತ ಕಾಲೇಜಿನ ವಿದ್ಯಾಭ್ಯಾಸ ಮಾಡಬೇಕಾದರೆ ಪರಿಚಯವಿದ್ದ. ಕಳೆದ ಒಂದು ತಿಂಗಳ ಹಿಂದೆ ಪಿರ್ಯಾದಿ ಯವರು ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ಪುನಃ ಶಿರಸಿಗೆ ಬರಲು ಯಡಳ್ಳಿ ಬಸ್ ನಿಲ್ದಾಣದ ಹತ್ತಿರ ಬಸ್ಸಿಗೆ ನಿಂತು ಕಾಯುತ್ತಿದ್ದಾಗ ಆರೋಪಿತ ( ಜಾಫರ್ ) ಹತ್ತಿರ ಬಂದು ತನ್ನನ್ನು ಪ್ರೀತಿಸುವಂತೆ ಕೈ ಹಿಡಿದು ಎಳೆದು ಪೀಡಿಸುತ್ತಿದ್ದರಿಂದ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತಿದ್ದೇನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ‌ ಕೂಡಾ ಈ ಇಬ್ಬರ ಫೋಟೋ‌ ಎಲ್ಲೆಡೆ ಹರಿದಾಡುತ್ತಿದೆ. ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿದ್ದು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

ವಿಸ್ಮಯ ನ್ಯೂಸ್ ಶಿರಸಿ

Back to top button