Follow Us On

WhatsApp Group
Important
Trending

ಹೆಂಡತಿ ಮನೆ ಬಿಟ್ಟು ಹೋಗಿರುದನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊಬ್ಬ ಸಾವಿಗೆ ಶರಣು

ಭಟ್ಕಳ: ಹೆಂಡತಿ ಮನೆ ಬಿಟ್ಟು ಹೋಗಿರುದನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಅಜಾದ ನಗರ 4ನೇ ಕ್ರಾಸ್ ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮೆಹಬೂಬ್ ಅಲಿ (38) ಎಂದು ಗುರುತಿಸಲಾಗಿದೆ. ಈತನು ವಿಪರೀತ ಮದ್ಯದ ದಾಸನಾಗಿದ್ದು, ಪ್ರತಿ ದಿನ ಸಾರಾಯಿ ಕುಡಿದುಕೊಂಡು ಬಂದು ಹೆಂಡತಿಯೊoದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ. ಇದರಿಂದ ಪತ್ನಿ ಬೇಸತ್ತು ತನ್ನ ತವರು ಮನೆಗೆ ಹೋಗಿತ್ತು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಪತಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button