ರಿಪೇರಿಗೆ ನಿಂತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಬಸ್: ಪ್ರಯಾಣಿಕರಿಗೆ ಗಾಯ

ಭಟ್ಕಳ: ಟಿಪ್ಪರ್ ಗೆ ಹಿಂಬದಿಯಿಂದ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಮಣ್ಕುಳಿಯ ಶೆಟ್ಟಿ ಗ್ಯಾರೇಜ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ದುರ್ಘಟನೆಯಲ್ಲಿ ಬಸ್ ಚಾಲಕ, ನಿರ್ವಾಹಕ ಸಹಿತ ನಾಲ್ಕು ಪ್ರಯಾಣಿಕರು ಚಿಕ್ಕಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಖಾಸಗಿ ಬಸ್ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.

ಭಟ್ಕಳದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ತೆರಳುತ್ತಿತ್ತು. ಈ ಬಸ್‌ ನಲ್ಲಿ ಕೇವಲ 7 ರಿಂದ 8 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಮಣ್ಮುಳಿಯ ರಾಷ್ಟ್ರೀಯ ಹೆದ್ದಾರಿ -66 ರ ಶೆಟ್ಟಿ ಗ್ಯಾರೇಜ್ ಎದುರಿಗೆ ರಿಪೇರಿಗೆ ನಿಂತಿದ್ದ ಟಿಪ್ಪರ್ ಹಿಂಬದಿಯಿಂದ ಬರುತ್ತಿದ್ದ ಖಾಸಗಿ ಬಸ್ ನೇರವಾಗಿ ಢಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಬಸ್ ಚಾಲಕ ರಾಜೀವ ತೆಕ್ಕಟ್ಟೆ, ನಿರ್ವಾಹಕ ಇಸ್ಮಾಯಿಲ್ ಕಿರಿಮಂಜೇಶ್ವರ,, ಪ್ರಯಾಣಿಕರಾದ ಖಲೀದ್ ಬೈಂದೂರು, ಆಸೀಪ್ರಾ, ರಾಘು ಖಾರ್ವಿ ಹಾಗು ಸುದೀಪ್ ಮಂಗಳೂರು ಎಂದು ತಿಳಿದು ಬಂದಿದೆ.

ವಿಸ್ಮಯ ನ್ಯೂಸ್ ಭಟ್ಕಳ

Exit mobile version