Follow Us On

WhatsApp Group
Focus News
Trending

ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರೌಢಿಮೆ ಹೆಚ್ಚಿಸಿಕೊಳ್ಳಿ- ಡಾ. ಶಿವಾನಂದ ನಾಯಕ


ಹಿರೇಗುತ್ತಿ: “ಇಂದಿನದು ಸ್ಪರ್ಧಾತ್ಮಕ ಯುಗ, ಮಕ್ಕಳು ಬಾಲ್ಯದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಪ್ರೌಢಿಮೆಯನ್ನು ತೋರುತ್ತಿರುವುದು ಪ್ರಗತಿಯ ಸೂಚಕ ಹಿರೇಗುತ್ತಿ ಹೈಸ್ಕೂಲ್ ಸುಂದರ ಪರಿಸರದಲ್ಲಿ ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಸಂಪೂರ್ಣ ವ್ಯವಸ್ಥೆಯೊಂದಿಗೆ ಸಿದ್ಧಗೊಂಡಿರುವ ಶಾಲೆ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಎಲ್ಲಾ ಪೂರಕ ಸಾಮಗ್ರಿಯಿಂದ ಸುಸಜ್ಜಿತಗೊಂಡಿದೆ, ವೈಜ್ಞಾನಿಕ ಪ್ರಯೋಗಾಲಯ ಸಾಂದರ್ಭಿಕವಾಗಿ ಸುಸಜ್ಜಿತವಾಗಿದ್ದು ಕ್ರೀಯಾಶೀಲ ಶಿಕ್ಷಕರ ಸಾಧನೆಗೆ ಕೈಗನ್ನಡಿಯಾಗಿದೆ” ಎಂದು ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಶಿವಾನಂದ ನಾಯಕ ನುಡಿದರು.

ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಕಾರವಾರ ನಿಕಟ ಸೇವಾ ಪೂರ್ವ ತರಬೇತಿ ಅಂಗವಾಗಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಭಿಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. “ಬಹುಶಃ ಸಮಾಜದಲ್ಲಿ ಯಾವ ಶ್ರೀಮಂತನಿಗೂ ಸಿಗಲಾರದಷ್ಟು ಮರ್ಯಾದೆ ಶಿಕ್ಷಕನದ್ದು, ಶಿಕ್ಷಣದ ಗುರಿಗಳು ಸಾಧಿತವಾಗಬೇಕಾದುದು ಮುಖ್ಯ ಶಿಕ್ಷಕನಿಂದಲೇ, ಆದ್ದರಿಂದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉತ್ತಮ ತರಬೇತಿ ಪಡೆದುಕೊಳ್ಳಬೇಕು, ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಆತ್ಮವಿಶ್ವಾಸದ ಬಗ್ಗೆ ಬದುಕನ್ನು ಕಟ್ಟಿಕೊಳ್ಳುವ ಶಿಕ್ಷಣದ ಕುರಿತು ವಿವರಣೆ ನೀಡಿದರು”.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್ ರಾಮು ಹಿರೇಗುತ್ತಿ “ಕಾರವಾರ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ನಿಕಟ ಸೇವಾ ಪೂರ್ವ ತರಬೇತಿ ಪರಿಶೀಲನೆಗೆ ಜಿಲ್ಲೆಯ ವಿವಿಧ ಹೈಸ್ಕೂಲ್‌ಗೆ ಭೇಟಿಕೊಟ್ಟಾಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಪರೀಕ್ಷೆಯ ಭಯವನ್ನು ಹೋಗಲಾಡಿಸುವ ಆತ್ಮವಿಶ್ವಾಸದ ಬಗ್ಗೆ ತಿಳಿಸುವ ಅಭಿಪ್ರೇರಣೆ ಕಾರ್ಯಕ್ರಮ ಶಿವಾಜಿ ಶಿಕ್ಷಣದ ಮಹಾವಿದ್ಯಾಲಯದ ಒಂದು ವಿನೂತನ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿ ಆಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೆಕರ, ನಾಗರಾಜ ನಾಯಕ, ಮಹಾದೇವ ಗೌಡ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ದಿವಗಿ, ಬಿ.ಇಡಿ ಪ್ರಶಿಕ್ಷಣಾರ್ಥಿ ಸ್ವಾತಿ ಹರಿಕಂತ್ರ ಉಪಸ್ಥಿತರಿದ್ದರು. ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮ ಸ್ವಾಗತಿಸಿ ನಿರ್ವಹಿಸಿದರು. ಶಿಕ್ಷಕ ಮಹಾದೇವ ಬಿ ಗೌಡ ವಂದಿಸಿದರು.
ವರದಿ: ಎನ್ ರಾಮು ಹಿರೇಗುತ್ತಿ

Back to top button