Follow Us On

WhatsApp Group
Important
Trending

ಮದುವೆ ಕರೆಯಲು ಬಂದಿದ್ದೇನೆ ಎಂದು ಹೇಳಿ ನೀರು ಕುಡಿಯುವ ನೆಪ ಮಾಡಿಕೊಂಡು ಮಹಿಳೆ ಮೇಲೆ ಹಲ್ಲೆ : ನಗ-ನಾಣ್ಯ ದೋಚಿ ಪರಾರಿ

ಮುಂಡಗೋಡ: ನೀರು ಕುಡಿಯುವ ನೆಪ ಮಾಡಿಕೊಂಡು ಮನೆ ಪ್ರವೇಶಿಸಿದ ವ್ಯಕ್ತಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಸುಮಾರು 1 ಲಕ್ಷ ರೂ ಬೆಲೆ ಬಾಳುವ ನಗ-ನಾಣ್ಯ ದೋಚಿಕೊಂಡು ಹೋದ ಘಟನೆ ನಡೆದಿದೆ. ತಾಲೂಕಿನ ಕಾತೂರ ಗ್ರಾಮದ ಗೀತಾ ಯಲ್ಲಾಪುರ ಎಂಬುವವರು ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದರು. ಮನೆಯಲ್ಲಿ ರಾತ್ರಿ ಮಹಿಳೆ ಒಬ್ಬರೆ ಇದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಂಡು ಮನೆಗೆ ಲಗ್ನ ಪತ್ರಿಕೆ ಕೊಡುವ ನೆಪದಲ್ಲಿ ವಂಚಕ ತೆರಳಿದ್ದಾನೆ.

ಮಗನ ಸ್ನೇಹಿತ ಎಂದು ಹೇಳಿ ಮಹಿಳೆಯ ಬಳಿ ಕುಡಿಯಲು ನೀರು ಕೇಳಿದ್ದಾನೆ. ಮಹಿಳೆಯು ನೀರು ಕೊಟ್ಟಿದ್ದಾರೆ. ಈ ವೇಳೆ ಮೃತ ಮಗನ ಭಾವಚಿತ್ರದ ಹತ್ತಿರ ಕಣ್ಣಿರು ಹಾಕುವಂತ ನಾಟಕಮಾಡಿ ಮಹಿಳೆಗೆ ಹಲ್ಲೆ ಮಾಡಿದ್ದಾನೆ. ಮಹಿಳೆಯ ಕೊರಳಿನಲ್ಲಿದ್ದ ಸುಮಾರು 70 ಸಾವಿರ ರೂ ಬೆಲೆಯ ಸರ, 20 ಸಾವಿರ ಬೆಲೆ ಬಾಳುವ 2 ಉಂಗರು ಹಾಗೂ ನಗದು 10 ಸಾವಿರ ರೂಪಾಯಿ ದೋಚಿಕೊಂಡು ದೋಚಿಕೊಂಡು ಪರಾರಿಯಾಗಿದ್ದಾನೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button