Follow Us On

WhatsApp Group
Focus News
Trending

ದಿನಕರ ವೇದಿಕೆಯ ವಾರ್ಷಿಕ ಸಭೆ ಹಾಗೂ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮ

ಅಂಕೋಲಾ: ದಿನಕರ ವೇದಿಕೆ ಅಂಕೋಲಾ ಇವರ ವಾರ್ಷಿಕ ಸಭೆ ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ತಾಲೂಕಿನ ಪಿ.ಎಂ.ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ಕಲಾವಿದ,ಸಾಹಿತಿ ಡಾ.ರಾಮಕೃಷ್ಣ ಗುಂದಿ ಅವರು ಮಾತನಾಡಿ ದಿನಕರ ವೇದಿಕೆಯ ಮೂಲಕ ತಾಲೂಕಿನಲ್ಲಿ ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.ನಿವೃತ್ತ ಪ್ರಾಚಾರ್ಯ, ಸಾಹಿತಿ ಮೋಹನ ಹಬ್ಬು ಅವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ 75 ವರ್ಷಗಳನ್ನು ಪೂರೈಸಿದ ವೇದಿಕೆಯ ಹಿರಿಯ ಸದಸ್ಯ ಆರ್. ವಿ. ವೆರ್ಣೇಕರ್, ವಸಂತ ಖೇಮು ನಾಯ್ಕ ಮತ್ತು ಎಂ.ಎಚ್. ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯ ಕಾರ್ಯದರ್ಶಿ ಸಂತೋಷ ಉಳ್ಳಿಕಾಶಿ ಸ್ವಾಗತಿಸಿದರು, ಅಧ್ಯಕ್ಷ ರವೀಂದ್ರ ಕೇಣಿ ಪ್ರಾಸ್ತಾವಿಕ ಮಾತನಾಡಿ ವರದಿ ವಾಚಿಸಿದರು, ಕಾರ್ಯಾಧ್ಯಕ್ಷ ಸಂತೋಷ ನಾಯಕ ಲೆಕ್ಕಪತ್ರಗಳ ವಿವರ ನೀಡಿದರು, ಅರ್ಚನಾ ನಾಯಕ ಸನ್ಮಾನಿತರನ್ನು ಪರಿಚಯಿಸಿದರು.

ಸಂಘಟನಾ ಕಾರ್ಯದರ್ಶಿ ರವಿ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಉಪಾಧ್ಯಕ್ಷ ಎನ್.ವಿ.ರಾಥೋಡ್ ವಂದಿಸಿದರು. ಪ್ರಮುಖರಾದ ಶೀಲಾ ಬಂಟ, ನಾಗಾನಂದ ಬಂಟ, ಉಮೇಶ ನಾಯ್ಕ, ಶ್ಯಾಮಸುಂದರ ಗೌಡ, ಖೇಮು ನಾಯ್ಕ, ರವಿ ನಾಯ್ಕ, ಎಂ.ಎಂ ಕರ್ಕಿಕರ, ಗೋಪಾಲ ಕೃಷ್ಣ ನಾಯಕ, ಪ್ರಭಾಕರ ಬಂಟ ಇತರರಿದ್ದರು

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button