Follow Us On

WhatsApp Group
Focus News
Trending

ಸಿದ್ದಾಪುರ ಪೊಲೀಸ್ ಠಾಣೆಗೆ ಎಸ್ ಪಿ ಭೇಟಿ: ತಾಲೂಕಿನಲ್ಲಿ ನ ಪರಿಸ್ಥಿತಿ ಅವಲೋಕನ

ಸಿದ್ದಾಪುರ: ಇಲ್ಲಿನ ಪೋಲೀಸ್ ಠಾಣೆಗೆ ಉತ್ತರ ಕನ್ನಡ ಜಿಲ್ಲಾ ಎಸ್ ಪಿ ಸುಮನ ಡಿ ಪಿ ಭೇಟಿ ನೀಡಿ, ಇಲಾಖೆಯ ಕಾರ್ಯವೈಖರಿ ಗಳ ಬಗ್ಗೆ ಪರೀಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರು ಹಿಜಾಬ ವಿವಾದ ಹಾಗೂ ಭಜರಂಗದಳ ಕಾರ್ಯಕರ್ತನ ಹತ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ ಇದೆ.

ಸಿದ್ದಾಪುರ- ಶಿರಸಿ, ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವುದರಿಂದ ಮುಂಜಾಗೃತ ಕ್ರಮಗಳು ಕುರಿತು ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿದ್ದೇನೆ. ಕಾನೂನು-ಸುವ್ಯವಸ್ಥೆಗೆ ಭಂಗವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ಉತ್ತರ ಕನ್ನಡ ಜಿಲ್ಲೆ ತಾಲೂಕು ತಾಲೂಕಿಗೆ ವಿಭಿನ್ನವಾಗಿದೆ.

ದೊಡ್ಡ ಜಿಲ್ಲೆ ಯಾಗಿರುವುದರಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದರು ಈ ವೇಳೆ ಸಿಪಿಐ ಕುಮಾರ ಕೆ. ಪಿಎಸ್ಐ ಎಂ ಜಿ ಕುಂಬಾರ, ಸಿಬ್ಬಂದಿ ಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ , ಸಿದ್ದಾಪುರ

Back to top button