ದಾಖಲೆಗಳಿಲ್ಲದೆ ಅಕ್ರಮವಾಗಿ ದನ ಸಾಗಾಟ : ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು
![](http://i0.wp.com/vismaya24x7.com/wp-content/uploads/2022/03/dana.jpg?fit=1200%2C720&ssl=1)
ಸಿದ್ದಾಪುರ: ಸರಿಯಾದ ದಾಖಲೆಗಳಿಲ್ಲದೆ ಹೊನ್ನಾವರ ಕಡೆಯಿಂದ ಸೊರಬದ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಿದ್ದಾಪುರದ ಬಿಳಿಗಿಯ ಕಲ್ಕಣಿ ಸಮೀಪದ ನಡೆದಿದೆ.ನಾಲ್ಕು ಹೋರಿ, ಒಂದು ಆಕಳನ್ನು ಮಿನಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿರುವಾಗ ಸಾರ್ವಜನಿಕರ ಕೈಯಲ್ಲಿ ಆರೋಪಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಹೊನ್ನಾವರ ತಾಲೂಕಿನ ಜನಕಡಕಾಲ್ ನ ಕೃಷ್ಣ ನಾಗಪ್ಪ ನಾಯ್ಕ, ದರ್ಬೆಜಡ್ಡಿಯ ಸುಬ್ರಹ್ಮಣ್ಯ ರಾಜು ಭಟ್, ಸೊರಬ ತಾಲ್ಲೂಕಿನ ಆನವಟ್ಟಿಯ ಉಳ್ಳೆಕೊಪ್ಪದ ರಮೇಶ ಸಣ್ಣಕೇರಿಯಪ್ಪ ಗೊಲ್ಲರ್, ಹಾನಗಲ್ ತಾಲೂಕಿನ ಹಿರೂರನ ಮಂಜುನಾಥ್ ಮಲ್ಲಪ್ಪ ಗೊಲ್ಲರ್ ಇವರ ಮೇಲೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.
![](http://i0.wp.com/vismaya24x7.com/wp-content/uploads/2021/11/rooping.jpg?resize=708%2C398&ssl=1)