Follow Us On

WhatsApp Group
Important
Trending

ಎಲೆಕ್ಟ್ರಿಕ್ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ: ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು

ಭಟ್ಕಳ: ಎಲೆಕ್ಟ್ರಿಕ್ ಬೈಕಿಗೆ ಹಿಂದಿನಿoದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಕ್ಕೆ ಮೊದಲೇ ಮೃತಪಟ್ಟ ಘಟನೆ ನಡೆದಿದೆ. ಶಿರಾಲಿ ತಟ್ಟಿಹಕ್ಕಲಿನ ನಿವಾಸಿ ಪಿಗ್ಮಿ ಕಲೆಕ್ಟರ್ ಮಂಜುನಾಥ ಪಾದ ಶಾನಬಾಗ್ (45) ಮೃತಪಟ್ಟವರಾಗಿದ್ದಾರೆ. ಇವರು ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿoದ ಬರುತ್ತಿದ್ದ ಕಾರು ಸಂಪೂರ್ಣ ಎಡ ಭಾಗಕ್ಕೆ ಬಂದು ಇವರ ಬೈಕಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ರಸ್ತೆ ಮೇಲೆ ಬಿದ್ದು ತಲೆಗೆ ತೀವ್ರ ಪಟ್ಟಾಗಿದ್ದು ತಕ್ಷಣ ಪ್ರಥಮ ಚಿಕಿತ್ಸೆ ಕೊಡಿಸಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಆರಂಭಿಸುವುದಕ್ಕೂ ಮುನ್ನವೇ ನಿಧನರಾಗಿದ್ದಾರೆ. ಈ ಕುರಿತು ಕಾರು ಚಾಲಕ ಗೋವಾದ ಪೆಂಡಾ ನಿವಾಸಿ ಮೊಹಮ್ಮದ್ ಅಜ್ಜಲ್ ತಂದೆ ಅಬ್ದುಲ್ ರೆಹಮಾನ್ ಈತನ ವಿರುದ್ಧ ತಟ್ಟಿಹಕ್ಕಲಿನ ಪ್ರೀತೇಶ ವೆಂಕಟೇಶ ಶಾನಭಾಗ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button