Follow Us On

WhatsApp Group
Important
Trending

ಮನೆಯ ಅಂಗಳದಲ್ಲಿ ಮರದ ಸಮೀಪ ಕಟ್ಟಿದ್ದ ಆಕಳು ಸಿಡಿಲು ಬಡಿದು ಸಾವು

ಅಂಕೋಲಾ: ತಾಲೂಕಿನಲ್ಲಿ ಅಲ್ಲಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಅಕಾಲಿಕ ಮಳೆ ಸುರಿದಿತ್ತು. ಪುರಸಭೆ ವ್ಯಾಪ್ತಿಯ ಶಿರಕುಳಿಯ ಮನೆಯೊಂದರ ಅಂಗಳದಲ್ಲಿ ಮರವೊಂದರ ಬಳಿ ಕಟ್ಟಿಟ್ಟ ಆಕಳೊಂದು  ಸಿಡಿಲಿಗೆ ಬಲಿಯಾಗಿದೆ.ಪಟ್ಟಣದ ಸುತ್ತ ಮುತ್ತ ರಾತ್ರಿ ವೇಳೆ ಭಾರೀ ಶಬ್ದಗಳೊಂದಿಗೆ ಗುಡುಗು ಸಿಡಿಲು ಉಂಟಾಗಿದ್ದು, ಸಿಡಿಲಿನ ರಭಸಕ್ಕೆ ಶಿರಕುಳಿ ನಿವಾಸಿ ಗಿರೀಶ ನಾಯ್ಕ ಎನ್ನುವವರ ಮನೆಯ ಆಕಳೊಂದು ಮೃತಪಟ್ಟರೆ, ನಾಯ್ಕ ಕುಟುಂಬದ ಮನೆಯ ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿದೆ ಎನ್ನಲಾಗಿದೆ.

ಪುರಸಭೆ ಸ್ಥಳೀಯ ವಾರ್ಡ್  ಸದಸ್ಯ ಶ್ರೀಧರ ನಾಯ್ಕ, ಪಶು ವೈದ್ಯ ಕೃಷ್ಣಮೂರ್ತಿ ಹೆಗಡೆ, ಕಂದಾಯ ಇಲಾಖೆಯ ಭಾರ್ಗವ ನಾಯಕ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯನ್ನು ಅಂದಾಜಿಸಿ, ನೊಂದ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿದೆ.ಗುಡುಗು – ಸಿಡಿಲಿನ ಪರಿಣಾಮ ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕೆಲ ಕಾಲ ವಿದ್ಯುತ್ ವ್ಯತ್ಯಯ ಕಂಡು ಬಂದಿತ್ತು.

ರಾಮನವಮಿ ಮತ್ತಿತರ ಕಾರಣಗಳಿಂದ ತಾಲೂಕಿನಲ್ಲಿ ನಡೆಯುತ್ತಿದ್ದ  ಕೆಲ ಕಾರ್ಯಕ್ರಮಗಳಿಗೆ ಮಳೆಯ ಕಾರಣದಿಂದ ಅಡ್ಡಿಯಾಗಿ,ಕೆಲ ಕಡೆ  ನಾಟಕ ಮತ್ತಿತರ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿದರು ಎನ್ನಲಾಗಿದೆ. ಒಟ್ಟಿನಲ್ಲಿ ಅಕಾಲಿಕ ಮಳೆ, ಗುಡುಗು ಸಿಡಿಲಿನಿಂದ ಮಾವು ಬೆಳೆಗಾರರು, ರೈತಾಪಿ ವರ್ಗ ಸೇರಿದಂತೆ  ಇತರರ ನೇಕರಿಗೂ ತೊಂದರೆಯಾದಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button